<p><strong>ರಾಯಬಾಗ: </strong>ಭಕ್ತಿಯು ಕೇವಲ ತೋರಿಕೆಗೆ ಸೀಮಿತವಾಗದೇ ಪ್ರತಿಯೊಂದು ಜೀವರಾಶಿಯಲ್ಲೂ ದೇವರನ್ನು ಕಾಣುವಂತಾಗಬೇಕು. ಮನುಷ್ಯ ಮೌಢ್ಯತೆಗೆ ಒಳಗಾಗದೆ ಶ್ರದ್ಧೆಯಿಂದ ದೇವರನ್ನು ಪೂಜಿಸಬೇಕು ಎಂದು ತಮಿಳುನಾಡಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆಗಿರುವ ಶಂಭು ಕಲ್ಲೋಳಿಕರ ಹೇಳಿದರು.</p>.<p>ಪಟ್ಟಣದ ಶಿವಪ್ರೇಮಿ ನವರಾತ್ರಿ ಉತ್ಸವ ಕಮಿಟಿಯ 25ನೇ ವಾರ್ಷಿಕೋತ್ಸವ ಅಂಗವಾಗಿ ಕಲ್ಲೋಳಿಕರ ಪ್ರತಿಷ್ಠಾನ ಹಾಗೂ ಆದರ್ಶ ಗ್ರೂಪ್–ಸವದತ್ತಿ ಆಶ್ರಯದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಕೋಲಾಟ ಸ್ಪರ್ಧೆಯಲ್ಲಿ ಮಾತನಾಡಿದರು.</p>.<p>ಈರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಾಬುರಾವ್ ಬಂಡಗರ, ಮುರುಗೇಶ ಕೋಟಿವಾಲೆ, ವಿನಯ ಚೌಗಲೆ, ಕಾರ್ತಿಕ ಶಿರಹಟ್ಟಿ, ಶಿವು ಬಂತೆ, ಸಿದ್ದು ದೇಸಾಯಿ, ಅಪ್ಪು ಪವಾರ, ಜಿನ್ನಪ್ಪ ಬಡೋರೆ, ಏಕನಾಥ ಪೂಜೇರಿ,ಬಸವರಾಜ ಖಿಚಡೆ ಇದ್ದರು.</p>.<p>ರಂಗೋಲಿಯಲ್ಲಿ ಅರಳಿದ ದುರ್ಗಾ ಮಾತೆ: ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಮಹಿಳೆಯರಿಗಾಗಿ ಉತ್ಸವ ಕಮಿಟಿ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕೆಲ ಮಹಿಳೆಯರು ರಂಗೋಲಿಯಲ್ಲಿ ದುರ್ಗಾ ಮಾತೆಯ ಚಿತ್ರ ಬಿಡಿಸಿ ಭಕ್ತಿ ಪ್ರದರ್ಶಿಸಿದರು. </p>.<p>ಪೂಜಾ ಗಡ್ಡೆ (ಪ್ರಥಮ), ರಾಧಿಕಾ ಪಾಟೀಲ (ದ್ವಿತೀಯ) ಮತ್ತು ದ್ರಾಕ್ಷಾಯಣಿ ಬಳ್ಳಾರಿ (ತೃತೀಯ) ಸ್ಥಾನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಬಾಗ: </strong>ಭಕ್ತಿಯು ಕೇವಲ ತೋರಿಕೆಗೆ ಸೀಮಿತವಾಗದೇ ಪ್ರತಿಯೊಂದು ಜೀವರಾಶಿಯಲ್ಲೂ ದೇವರನ್ನು ಕಾಣುವಂತಾಗಬೇಕು. ಮನುಷ್ಯ ಮೌಢ್ಯತೆಗೆ ಒಳಗಾಗದೆ ಶ್ರದ್ಧೆಯಿಂದ ದೇವರನ್ನು ಪೂಜಿಸಬೇಕು ಎಂದು ತಮಿಳುನಾಡಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆಗಿರುವ ಶಂಭು ಕಲ್ಲೋಳಿಕರ ಹೇಳಿದರು.</p>.<p>ಪಟ್ಟಣದ ಶಿವಪ್ರೇಮಿ ನವರಾತ್ರಿ ಉತ್ಸವ ಕಮಿಟಿಯ 25ನೇ ವಾರ್ಷಿಕೋತ್ಸವ ಅಂಗವಾಗಿ ಕಲ್ಲೋಳಿಕರ ಪ್ರತಿಷ್ಠಾನ ಹಾಗೂ ಆದರ್ಶ ಗ್ರೂಪ್–ಸವದತ್ತಿ ಆಶ್ರಯದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಕೋಲಾಟ ಸ್ಪರ್ಧೆಯಲ್ಲಿ ಮಾತನಾಡಿದರು.</p>.<p>ಈರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಾಬುರಾವ್ ಬಂಡಗರ, ಮುರುಗೇಶ ಕೋಟಿವಾಲೆ, ವಿನಯ ಚೌಗಲೆ, ಕಾರ್ತಿಕ ಶಿರಹಟ್ಟಿ, ಶಿವು ಬಂತೆ, ಸಿದ್ದು ದೇಸಾಯಿ, ಅಪ್ಪು ಪವಾರ, ಜಿನ್ನಪ್ಪ ಬಡೋರೆ, ಏಕನಾಥ ಪೂಜೇರಿ,ಬಸವರಾಜ ಖಿಚಡೆ ಇದ್ದರು.</p>.<p>ರಂಗೋಲಿಯಲ್ಲಿ ಅರಳಿದ ದುರ್ಗಾ ಮಾತೆ: ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಮಹಿಳೆಯರಿಗಾಗಿ ಉತ್ಸವ ಕಮಿಟಿ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕೆಲ ಮಹಿಳೆಯರು ರಂಗೋಲಿಯಲ್ಲಿ ದುರ್ಗಾ ಮಾತೆಯ ಚಿತ್ರ ಬಿಡಿಸಿ ಭಕ್ತಿ ಪ್ರದರ್ಶಿಸಿದರು. </p>.<p>ಪೂಜಾ ಗಡ್ಡೆ (ಪ್ರಥಮ), ರಾಧಿಕಾ ಪಾಟೀಲ (ದ್ವಿತೀಯ) ಮತ್ತು ದ್ರಾಕ್ಷಾಯಣಿ ಬಳ್ಳಾರಿ (ತೃತೀಯ) ಸ್ಥಾನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>