<p><strong>ಬೆಳಗಾವಿ</strong>: ನಗರದಲ್ಲಿ ಭಾನುವಾರ ಸಡಗರ ಮತ್ತು ಸೌಹಾರ್ದದಿಂದ ಈದ್–ಮಿಲಾದ್ ಮೆರವಣಿಗೆ ನಡೆಯಿತು. ಮುಸ್ಲಿಮರೊಂದಿಗೆ ಹಿಂದೂಗಳೂ ಪಾಲ್ಗೊಂಡರು.</p>.<p>ಸೆಪ್ಟೆಂಬರ್ 5ರಂದು ಮೆರವಣಿಗೆ ನಿಗದಿ ಆಗಿತ್ತು. ಆದರೆ, ಸೆಪ್ಟೆಂಬರ್ 6ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಿದ್ದ ಕಾರಣ ಇದನ್ನು ಮುಂದೂಡಲಾಗಿತ್ತು.</p>.<p>ಮುಸ್ಲಿಂ ಮುಖಂಡರು, ಧಾರ್ಮಿಕ ಗುರುಗಳು ಅಲ್ಲದೇ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರೂ ಮೆರವಣಿಗೆಯಲ್ಲಿ ಪಾಲ್ಗೊಂಡರು.</p>.<p>ಮೆರವಣಿಗೆಯಲ್ಲಿ ಧ್ವಜಗಳು ರಾರಾಜಿಸಿದವು. ‘ಕವ್ವಾಲಿ’ಗಳು ಅನುರಣಿಸಿದವು. ಸಂಗೀತ ವಾದ್ಯಗಳ ಅಬ್ಬರವಿತ್ತು. ವಿವಿಧ ಸಂಘಟನೆಯವರು ಬಾಳೆಹಣ್ಣು, ಐಸ್ಕ್ರೀಮ್, ಲಡ್ಡು, ಕುಡಿಯುವ ನೀರು ಮತ್ತು ಶರಬತ್ ವಿತರಿಸಿದರು. ಧರ್ಮಗುರು ಮುಫ್ತಿ ಮಂಜೂರ್ ಆಲಂ ಅವರು ಹಬ್ಬದ ಸಂದೇಶ ಸಾರಿದರು.</p>.<p>ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಇತರ ಅಧಿಕಾರಿಗಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ನಗರದಲ್ಲಿ ಭಾನುವಾರ ಸಡಗರ ಮತ್ತು ಸೌಹಾರ್ದದಿಂದ ಈದ್–ಮಿಲಾದ್ ಮೆರವಣಿಗೆ ನಡೆಯಿತು. ಮುಸ್ಲಿಮರೊಂದಿಗೆ ಹಿಂದೂಗಳೂ ಪಾಲ್ಗೊಂಡರು.</p>.<p>ಸೆಪ್ಟೆಂಬರ್ 5ರಂದು ಮೆರವಣಿಗೆ ನಿಗದಿ ಆಗಿತ್ತು. ಆದರೆ, ಸೆಪ್ಟೆಂಬರ್ 6ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಿದ್ದ ಕಾರಣ ಇದನ್ನು ಮುಂದೂಡಲಾಗಿತ್ತು.</p>.<p>ಮುಸ್ಲಿಂ ಮುಖಂಡರು, ಧಾರ್ಮಿಕ ಗುರುಗಳು ಅಲ್ಲದೇ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರೂ ಮೆರವಣಿಗೆಯಲ್ಲಿ ಪಾಲ್ಗೊಂಡರು.</p>.<p>ಮೆರವಣಿಗೆಯಲ್ಲಿ ಧ್ವಜಗಳು ರಾರಾಜಿಸಿದವು. ‘ಕವ್ವಾಲಿ’ಗಳು ಅನುರಣಿಸಿದವು. ಸಂಗೀತ ವಾದ್ಯಗಳ ಅಬ್ಬರವಿತ್ತು. ವಿವಿಧ ಸಂಘಟನೆಯವರು ಬಾಳೆಹಣ್ಣು, ಐಸ್ಕ್ರೀಮ್, ಲಡ್ಡು, ಕುಡಿಯುವ ನೀರು ಮತ್ತು ಶರಬತ್ ವಿತರಿಸಿದರು. ಧರ್ಮಗುರು ಮುಫ್ತಿ ಮಂಜೂರ್ ಆಲಂ ಅವರು ಹಬ್ಬದ ಸಂದೇಶ ಸಾರಿದರು.</p>.<p>ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಇತರ ಅಧಿಕಾರಿಗಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>