<p><strong>ಚನ್ನಮ್ಮನ ಕಿತ್ತೂರು:</strong> ಯೂರಿಯಾ ರಸಗೊಬ್ಬರಕ್ಕಾಗಿ ಹಂಗಾಮಿನಲ್ಲಿ ರೈತರನ್ನು ಸತಾಯಿಸುವ ಅಂಗಡಿಕಾರರು ಈಗಿನಿಂದಲೇ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ.</p>.<p>ಮಾರಾಟ ಮಾಡುವ ಅಂಗಡಿಯಲ್ಲಿ ಅಥವಾ ಅಂಗಡಿ ಸಮೀಪ ಇರುವ ಗೋದಾಮಿನಲ್ಲಿ ದಾಸ್ತಾನು ಮಾಡದೆ ಚನ್ನಮ್ಮನ ಕಿತ್ತೂರಿನ ಪಿಕೆಪಿಎಸ್ ಗೋದಾಮಿನಲ್ಲಿ ರಸಗೊಬ್ಬರ ಸಂಗ್ರಹ ಮಾಡಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿರುವುದು ಅಕ್ರಮಕ್ಕೆ ಹೆಚ್ಚು ಪುಷ್ಟಿ ನೀಡುವಂತಿದೆ ಎನ್ನುತ್ತಾರೆ ಅವರು.</p>.<div><blockquote>ರಸಗೊಬ್ಬರ ಬೇರೆ ಕಡೆಗೆ ದಾಸ್ತಾನು ಮಾಡಿರುವ ಆಗ್ರೋ ಕೇಂದ್ರದ ಮಾಲೀಕನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಉತ್ತರ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು </blockquote><span class="attribution">ಮಂಜುನಾಥ ಕೆಂಚರಾಹುತ್, ಅಧಿಕಾರಿ, ರೈತಸಂಪರ್ಕ ಕೇಂದ್ರ ಚನ್ನಮ್ಮನ ಕಿತ್ತೂರು</span></div>.<p>ಸೊಸೈಟಿ ಮೂಲಕ ಸಾಗಾಟ ಮಾಡುತ್ತಿದ್ದರು ಎನ್ನಲಾದ ಲಾರಿಯನ್ನು ರೈತರು ಮಂಗಳವಾರ ಮಧ್ಯಾಹ್ನ ಹಿಡಿದಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಅಂಗಡಿ ಮಾಲೀಕ ಸಮಜಾಯಿಸಿ ನೀಡಲು ಹೋದರು. ಇದಕ್ಕೆ ರೈತರು ಒಪ್ಪಲಿಲ್ಲ. ಸ್ಥಳಕ್ಕೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ್ ಅವರನ್ನು ಕರೆಸಲಾಯಿತು.</p>.<p>ಅಂಗಡಿ ಬಿಟ್ಟು ಬೇರೆ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದು ತಪ್ಪು. ಈ ಬಗ್ಗೆ ಅಂಗಡಿ ಮಾಲೀಕನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ರಸಗೊಬ್ಬರ ಅಗತ್ಯವಿದ್ದ ರೈತರಿಗೆ ವಿತರಿಸಲು ಸೂಚಿಸಲಾಗುವುದು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು:</strong> ಯೂರಿಯಾ ರಸಗೊಬ್ಬರಕ್ಕಾಗಿ ಹಂಗಾಮಿನಲ್ಲಿ ರೈತರನ್ನು ಸತಾಯಿಸುವ ಅಂಗಡಿಕಾರರು ಈಗಿನಿಂದಲೇ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ.</p>.<p>ಮಾರಾಟ ಮಾಡುವ ಅಂಗಡಿಯಲ್ಲಿ ಅಥವಾ ಅಂಗಡಿ ಸಮೀಪ ಇರುವ ಗೋದಾಮಿನಲ್ಲಿ ದಾಸ್ತಾನು ಮಾಡದೆ ಚನ್ನಮ್ಮನ ಕಿತ್ತೂರಿನ ಪಿಕೆಪಿಎಸ್ ಗೋದಾಮಿನಲ್ಲಿ ರಸಗೊಬ್ಬರ ಸಂಗ್ರಹ ಮಾಡಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿರುವುದು ಅಕ್ರಮಕ್ಕೆ ಹೆಚ್ಚು ಪುಷ್ಟಿ ನೀಡುವಂತಿದೆ ಎನ್ನುತ್ತಾರೆ ಅವರು.</p>.<div><blockquote>ರಸಗೊಬ್ಬರ ಬೇರೆ ಕಡೆಗೆ ದಾಸ್ತಾನು ಮಾಡಿರುವ ಆಗ್ರೋ ಕೇಂದ್ರದ ಮಾಲೀಕನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಉತ್ತರ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು </blockquote><span class="attribution">ಮಂಜುನಾಥ ಕೆಂಚರಾಹುತ್, ಅಧಿಕಾರಿ, ರೈತಸಂಪರ್ಕ ಕೇಂದ್ರ ಚನ್ನಮ್ಮನ ಕಿತ್ತೂರು</span></div>.<p>ಸೊಸೈಟಿ ಮೂಲಕ ಸಾಗಾಟ ಮಾಡುತ್ತಿದ್ದರು ಎನ್ನಲಾದ ಲಾರಿಯನ್ನು ರೈತರು ಮಂಗಳವಾರ ಮಧ್ಯಾಹ್ನ ಹಿಡಿದಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಅಂಗಡಿ ಮಾಲೀಕ ಸಮಜಾಯಿಸಿ ನೀಡಲು ಹೋದರು. ಇದಕ್ಕೆ ರೈತರು ಒಪ್ಪಲಿಲ್ಲ. ಸ್ಥಳಕ್ಕೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ್ ಅವರನ್ನು ಕರೆಸಲಾಯಿತು.</p>.<p>ಅಂಗಡಿ ಬಿಟ್ಟು ಬೇರೆ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದು ತಪ್ಪು. ಈ ಬಗ್ಗೆ ಅಂಗಡಿ ಮಾಲೀಕನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ರಸಗೊಬ್ಬರ ಅಗತ್ಯವಿದ್ದ ರೈತರಿಗೆ ವಿತರಿಸಲು ಸೂಚಿಸಲಾಗುವುದು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>