<p><strong>ಕಾಗವಾಡ (ಬೆಳಗಾವಿ ಜಿಲ್ಲೆ):</strong> ಹೆಸ್ಕಾಂ ಉಗಾರ ಖುರ್ದ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರ್ಯೋಧನ ಮಾಳಿ ಎಂಬುವರು ರೈತರೊಬ್ಬರಿಂದ ಲಂಚ ಪಡೆದಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿದೆ.</p>.<p>ಶಿರುಗುಪ್ಪಿಯ ರೈತ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ₹3 ಸಾವಿರ ಲಂಚ ಪಡೆಯುವಾಗ ರೈತರೆ ವಿಡಿಯೊ ಮಾಡಿದ್ದಾರೆ. ಅಧಿಕಾರಿ ಟೇಬಲ್ ಮೇಲೆ ಕುಳಿತು ಹಣ ಎಣಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ವಿಡಿಯೊದಲ್ಲಿದೆ. ಈ ತಕ್ಷಣಕ್ಕೆ ನಿಮ್ಮ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ಅಧಿಕಾರಿ ಹೇಳಿದ ಮಾತುಗಳೂ ವಿಡಿಯೊದಲ್ಲಿವೆ. </p>.<p>ಆದರೆ, ಈ ಬಗ್ಗೆ ರೈತ ದೂರು ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ. ಇದು ಯಾವಾಗ ನಡೆದಿದೆ ಎಂಬ ಬಗ್ಗೆಯೂ ರೈತ ಯಾವುದೇ ಮಾಹಿತಿ ನೀಡಿಲ್ಲ.</p>.<div><blockquote>ಧುರ್ಯೋದನ ಮಾಳಿ ಅವರ ಮೇಲೆ ಆರೋಪ ಕೇಳಿ ಬಂದ ತಕ್ಷಣ ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆಗೆ ನಡೆಯಲಿದೆ</blockquote><span class="attribution">ಪ್ರವೀಣಕುಮಾರ ಚಿಕ್ಕಾಡೆ ಮುಖ್ಯ ಎಂಜಿನಿಯರ್ ಹೆಸ್ಕಾಂ ಬೆಳಗಾವಿ (ಪ್ರಭಾರಿ)</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಗವಾಡ (ಬೆಳಗಾವಿ ಜಿಲ್ಲೆ):</strong> ಹೆಸ್ಕಾಂ ಉಗಾರ ಖುರ್ದ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರ್ಯೋಧನ ಮಾಳಿ ಎಂಬುವರು ರೈತರೊಬ್ಬರಿಂದ ಲಂಚ ಪಡೆದಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿದೆ.</p>.<p>ಶಿರುಗುಪ್ಪಿಯ ರೈತ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ₹3 ಸಾವಿರ ಲಂಚ ಪಡೆಯುವಾಗ ರೈತರೆ ವಿಡಿಯೊ ಮಾಡಿದ್ದಾರೆ. ಅಧಿಕಾರಿ ಟೇಬಲ್ ಮೇಲೆ ಕುಳಿತು ಹಣ ಎಣಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ವಿಡಿಯೊದಲ್ಲಿದೆ. ಈ ತಕ್ಷಣಕ್ಕೆ ನಿಮ್ಮ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ಅಧಿಕಾರಿ ಹೇಳಿದ ಮಾತುಗಳೂ ವಿಡಿಯೊದಲ್ಲಿವೆ. </p>.<p>ಆದರೆ, ಈ ಬಗ್ಗೆ ರೈತ ದೂರು ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ. ಇದು ಯಾವಾಗ ನಡೆದಿದೆ ಎಂಬ ಬಗ್ಗೆಯೂ ರೈತ ಯಾವುದೇ ಮಾಹಿತಿ ನೀಡಿಲ್ಲ.</p>.<div><blockquote>ಧುರ್ಯೋದನ ಮಾಳಿ ಅವರ ಮೇಲೆ ಆರೋಪ ಕೇಳಿ ಬಂದ ತಕ್ಷಣ ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆಗೆ ನಡೆಯಲಿದೆ</blockquote><span class="attribution">ಪ್ರವೀಣಕುಮಾರ ಚಿಕ್ಕಾಡೆ ಮುಖ್ಯ ಎಂಜಿನಿಯರ್ ಹೆಸ್ಕಾಂ ಬೆಳಗಾವಿ (ಪ್ರಭಾರಿ)</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>