ಅಧ್ಯಕ್ಷತೆ ವಹಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಎಸ್.ಎಂ. ಗಂಗಾಧರಯ್ಯ, ‘ಶಕ್ಕಿಳಾರ್ನ ಪೆರಿಯ ಪುರಾಣ, ತಿರುಕ್ಕುರುಳ್, ತೊಲ್ಕಾಪ್ಪಿಯಂ, ಕವಿರಾಜ ಮಾರ್ಗ, ಪಂಪಭಾರತ, ಗದಾಯುದ್ಧ, ಶಬ್ಧಮಣಿದರ್ಪಣದಂತಹ ಕೃತಿಗಳನ್ನು ಎರಡು ಭಾಷೆಗಳ ಮೂಲಕ ಅಧ್ಯಯನ ಮಾಡಿ ಚರ್ಚಿಸಲು ವಿಫುಲ ಅವಕಾಶಗಳಿವೆ’ ಎಂದು ಅಭಿಪ್ರಾಯಪಟ್ಟರು.