ಕನ್ನಡ ತಾಯಿ ಭುವನೇಶ್ವರಿಯ ಮಕ್ಕಳಿಗೆ ಕರ್ನಾಟಕದಲ್ಲಿಯೇ ರಕ್ಷಣೆ ಇಲ್ಲವಾಗಿದೆ. ಕಾಲೇಜಿನಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುವುದರಲ್ಲಿ ತಪ್ಪೇನಿದೆ? ಈ ನಾಡಿನ ಧ್ವಜವನ್ನು ಎಲ್ಲ ಕಾಲೇಜಿನಲ್ಲಿ, ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಇದನ್ನು ಸಹಿಸದ ಮರಾಠಿ ಹುಡುಗರ ಮೇಲೆ ಕ್ರಮ ಕೈಗೊಳ್ಳಬೇಕು, ಹಲ್ಲೆಕೋರರನ್ನು ಕಾಲೇಜಿನಿಂದ ಹೊರಹಾಕಬೇಕು, ಅವರಿಗೆ ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಬಾರದು, ಹುಡುಗರು ಅಪ್ರಾಪ್ತರಾಗಿದ್ದರೆ ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಎಂದು ಪ್ರಕರಣ ದಾಖಲಿಸಬೇಕು' ಎಂದೂ ಆಗ್ರಹಿಸಿದರು.