ಜೊತೆಗೆ, ಲಖನ್ ಜಾರಕಿಹೊಳಿ ಕಣದಿಂದ ಹಿಂದೆ ಸರಿಯುವಂತೆಯೂ ಪ್ರಯತ್ನ ನಡೆಸಿದ್ದಾರೆ. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ನಾಮಪತ್ರ ವಾಪಸ್ ಪಡೆಯಲು ನ.26 ಕೊನೆ ದಿನವಾಗಿದೆ. ಲಖನ್ ನಿರ್ಧಾರದ ಮೇಲೆ ಕಣದಲ್ಲಿನ ಚಿತ್ರಣ ನಿರ್ಧಾರವಾಗಲಿದೆ. ಈ ನಡುವೆ, ಪಕ್ಷದ ವರಿಷ್ಠರು ಕೂಡ ಲಖನ್ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ಇದು ಸಫಲವಾಗುವುದೋ ಇಲ್ಲವೋ ಎನ್ನುವುದು ಶುಕ್ರವಾರ ಗೊತ್ತಾಗಲಿದೆ.