<p><strong>ಖಾನಾಪುರ:</strong> ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಒಂದೇ ದಿನ ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿಭಾಯಿಸಿದರು!</p>.<p>ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾದ ಆರೋಪದಡಿ ಹೈಕೋರ್ಟ್ ಸೂಚನೆಯಂತೆ ಕಳೆದ ನ.14ರಂದು ಖಾನಾಪುರ ತಹಶೀಲ್ದಾರ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ದುಂಡಪ್ಪ ಕೋಮಾರ; ಬುಧವಾರ ಸುಪ್ರೀಂಕೋರ್ಟ್ ಆದೇಶದೊಂದಿಗೆ ಮರಳಿ ತಮ್ಮ ಹುದ್ದೆಗೆ ಹಾಜರಾದರು. ಈ ಮುಂಚೆಯೇ ಸರ್ಕಾರ ಮಂಜುಳಾ ನಾಯಕ ಅವರನ್ನು ಇಲ್ಲಿಗೆ ನಿಯೋಜನೆ ಮಾಡಿದೆ.</p>.<p>ಒಬ್ಬರು ನ್ಯಾಯಾಲಯದ ಆದೇಶದಂತೆ ಹಕ್ಕು ಚಲಾಯಿಸಿದರು, ಇನ್ನೊಬ್ಬರು ಸರ್ಕಾರದ ನಿಯಮ ಪಾಲಿಸಿದರು.</p>.<p>ಬುಧವಾರ ಕಚೇರಿಗೆ ಬಂದ ದುಂಡಪ್ಪ ತಮ್ಮ ಬಳಿ ನ್ಯಾಯಾಲಯದ ಆದೇಶವಿದ್ದು ಹುದ್ದೆ ಬಿಟ್ಟುಕೊಡಬೇಕು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುಳಾ, ತಮಗೆ ಸರ್ಕಾರ ಆದೇಶ ನೀಡಿ ಇಲ್ಲಿ ಪೋಸ್ಟಿಂಗ್ ನೀಡಿದೆ. ಮರಳಿ ಆದೇಶ ಬಂದರೆ ಬಿಟ್ಟುಕೊಡಲಾಗುವುದು ಎಂದರು.</p>.<p>ಮಂಜುಳಾ ಅವರು ಮಧ್ಯಾಹ್ನದ ಊಟಕ್ಕೆ ತರಳಿದಾಗ ದುಂಡಪ್ಪ ಕುರ್ಚಿ ಮೇಲೆ ಕುಳಿತು ಅಧಿಕಾರ ಚಲಾಯಿಸಿದರು. ಆಗ ಮಂಜುಳಾ ಅವರು ಗ್ರೇಡ್-2 ತಹಶೀಲ್ದಾರ ಕೊಠಡಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ:</strong> ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಒಂದೇ ದಿನ ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿಭಾಯಿಸಿದರು!</p>.<p>ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾದ ಆರೋಪದಡಿ ಹೈಕೋರ್ಟ್ ಸೂಚನೆಯಂತೆ ಕಳೆದ ನ.14ರಂದು ಖಾನಾಪುರ ತಹಶೀಲ್ದಾರ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ದುಂಡಪ್ಪ ಕೋಮಾರ; ಬುಧವಾರ ಸುಪ್ರೀಂಕೋರ್ಟ್ ಆದೇಶದೊಂದಿಗೆ ಮರಳಿ ತಮ್ಮ ಹುದ್ದೆಗೆ ಹಾಜರಾದರು. ಈ ಮುಂಚೆಯೇ ಸರ್ಕಾರ ಮಂಜುಳಾ ನಾಯಕ ಅವರನ್ನು ಇಲ್ಲಿಗೆ ನಿಯೋಜನೆ ಮಾಡಿದೆ.</p>.<p>ಒಬ್ಬರು ನ್ಯಾಯಾಲಯದ ಆದೇಶದಂತೆ ಹಕ್ಕು ಚಲಾಯಿಸಿದರು, ಇನ್ನೊಬ್ಬರು ಸರ್ಕಾರದ ನಿಯಮ ಪಾಲಿಸಿದರು.</p>.<p>ಬುಧವಾರ ಕಚೇರಿಗೆ ಬಂದ ದುಂಡಪ್ಪ ತಮ್ಮ ಬಳಿ ನ್ಯಾಯಾಲಯದ ಆದೇಶವಿದ್ದು ಹುದ್ದೆ ಬಿಟ್ಟುಕೊಡಬೇಕು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುಳಾ, ತಮಗೆ ಸರ್ಕಾರ ಆದೇಶ ನೀಡಿ ಇಲ್ಲಿ ಪೋಸ್ಟಿಂಗ್ ನೀಡಿದೆ. ಮರಳಿ ಆದೇಶ ಬಂದರೆ ಬಿಟ್ಟುಕೊಡಲಾಗುವುದು ಎಂದರು.</p>.<p>ಮಂಜುಳಾ ಅವರು ಮಧ್ಯಾಹ್ನದ ಊಟಕ್ಕೆ ತರಳಿದಾಗ ದುಂಡಪ್ಪ ಕುರ್ಚಿ ಮೇಲೆ ಕುಳಿತು ಅಧಿಕಾರ ಚಲಾಯಿಸಿದರು. ಆಗ ಮಂಜುಳಾ ಅವರು ಗ್ರೇಡ್-2 ತಹಶೀಲ್ದಾರ ಕೊಠಡಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>