ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಸ್ವಾತಂತ್ರ್ಯ ಬಂದಾಗಿನಿಂದಲೂ ಪರಿಶಿಷ್ಟರಿಗೆ ಶೇ 15ರಷ್ಟು ಮೀಸಲಾತಿಯನ್ನೇ ಮುಂದುವರಿಸಲಾಗಿದೆ. ಇದ್ದುದ್ದರಲ್ಲೇ ಹಂಚಿ ತಿನ್ನುತ್ತಿದ್ದರೂ ಕೆಲವು ಸಮಾಜದವರು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ, ನಮ್ಮ ಮೀಸಲಾತಿಯನ್ನು ನಾವೀಗ ಕೇಳುತ್ತಿದ್ದೇವೆ. ಸ್ಪೃಶ್ಯ ಜಾತಿಗಳನ್ನು ನಮ್ಮೊಂದಿಗೆ ಸೇರಿಸಬಾರದು’ ಎಂದು ಆಗ್ರಹಿಸಿದರು.