<p><strong>ಬೆಳಗಾವಿ</strong>: ‘ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ವಯೋಮಾನದ ಮತ್ತು ರಾಷ್ಟ್ರಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗಿನ ಆಟಗಾರರಿಗೆ ಫಿಜಿಯೊಥೆರಪಿಸ್ಟ್ಗಳ ಅಗತ್ಯವಿದೆ’ ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ನ (ಕಾಹೇರ್) ಇನ್ಸ್ಟಿಟ್ಯೂಟ್ ಆಫ್ ಫಿಜಿಯೊಥೆರಪಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಫಿಜಿಯೊಥೆರಪಿ ಸಮ್ಮೇಳನ(ಪರ್ಲ್ ಫಿಜಿಯೊಕಾನ್–2025) ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಫಿಜಿಯೊಥೆರಪಿ ವ್ಯವಸ್ಥೆ ಇಲ್ಲದ ಕಾಲದಲ್ಲಿ ಆಟಗಾರರಿಗೆ ಬಹಳ ತೊಂದರೆ ಇದ್ದವು. ಈಗ ಫಿಜಿಯೊಥೆರಪಿ ಸಾಕಷ್ಟು ಆಧುನೀಕರಣಗೊಂಡಿದ್ದು, ಕ್ರೀಡೆಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದರು. </p>.<p>‘ಇಂದು ಪ್ರತಿ ಆಟಗಾರರು ಫಿಜಿಯೊಥೆರಪಿ ಚಿಕಿತ್ಸೆ ಪಡೆಯುತ್ತಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ 15 ಆಟಗಾರರಿದ್ದು, ಅವರನ್ನು ಸದೃಢಗೊಳಿಸಲು ತೆರೆಮರೆಯಲ್ಲಿ 15ರಿಂದ 20 ಮಂದಿ ಕೆಲಸ ಮಾಡುತ್ತಾರೆ. ಆಟಗಾರರನ್ನು ಸಿದ್ಧಗೊಳಿಸಿ ಮೈದಾನಕ್ಕೆ ತರುವಲ್ಲಿ ಫಿಜಿಯೊಥೆರಪಿಸ್ಟ್ಗಳ ಪಾತ್ರವೂ ಮಹತ್ತರವಾಗಿದೆ’ ಎಂದು ಹೇಳಿದರು.</p>.<p>ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ನಾನು ರಾಜ್ಯಸಭಾ ಸದಸ್ಯನಾಗಿದ್ದ ಸಂದರ್ಭ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸ್ಥಾಪಿಸಬೇಕು ಎಂದು ಹೋರಾಡಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ’ ಎಂದು ಹೇಳಿದರು. </p>.<p>‘ಕೃಷಿ, ಸಂಶೋಧನೆ, ಆರೋಗ್ಯ, ಶಿಕ್ಷಣದ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಲಭಿಸಬೇಕು ಎಂಬ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ’ ಎಂದರು.</p>.<p>ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ನ ಚೇರ್ಮನ್ ಡಾ.ಇಫ್ತಿಕರ್ಅಲಿ, ಕೇಂದ್ರ ಸರ್ಕಾರದ ಫಿಜಿಯೊಥೆರಪಿ ಪ್ರೊಫೆಷನಲ್ ಕೌನ್ಸಿಲ್ನ ಸದಸ್ಯರಾದ ಡಾ.ಅಲಿ ಇರಾನಿ, ಡಾ. ವಿ.ಪಿ.ಗುಪ್ತಾ, ಡಾ.ಆಶಿಶ್ ಕಕ್ಕಡ, ಡಾ.ಕೇತನ ಭಾಟಿಕರ ಮಾತನಾಡಿದರು.</p>.<p>ಕಾಹೇರ್ ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಸಂಜೀವಕುಮಾರ, ಡಾ.ವಿಜಯ ಕಾಗೆ, ಡಾ.ದೀಪಾ ಮೆಟಗುಡ್ಡ ಉಪಸ್ಥಿತರಿದ್ದರು. ಡಾ.ಸಂತೋಷ ಮೆಟಗುಡ್ಡ ಸ್ವಾಗತಿಸಿದರು. ಡಾ. ಗಣೇಶ ಬಿ.ಆರ್. ವಂದಿಸಿದರು.</p>.<p><strong>‘ಗೋವಾದಲ್ಲಿ ಫಿಜಿಯೊಥೆರಪಿ ಮಹಾವಿದ್ಯಾಲಯ’</strong></p><p> ‘ಗೋವಾದಲ್ಲಿ ಶೀಘ್ರ ಫಿಜಿಯೊಥೆರಪಿ ಮಹಾವಿದ್ಯಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯವಿರುವ ಆಸ್ಪತ್ರೆ ತರಬೇತಿ ಕೇಂದ್ರದ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಚಿಕಿತ್ಸೆ ತರಬೇತಿ ನೀಡುವುದು ನಮ್ಮ ಧ್ಯೇಯ’ ಎಂದು ಕೋರೆ ಹೇಳಿದರು.</p>.<div><blockquote>ಹುಬ್ಬಳ್ಳಿಯಲ್ಲಿ ನಿರ್ಮಿಸಿದ 1 ಸಾವಿರ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಶೀಘ್ರವೇ ಜನಸೇವೆಗೆ ಅರ್ಪಿಸಲಾಗುವುದು </blockquote><span class="attribution">-ಪ್ರಭಾಕರ ಕೋರೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ವಯೋಮಾನದ ಮತ್ತು ರಾಷ್ಟ್ರಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗಿನ ಆಟಗಾರರಿಗೆ ಫಿಜಿಯೊಥೆರಪಿಸ್ಟ್ಗಳ ಅಗತ್ಯವಿದೆ’ ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ನ (ಕಾಹೇರ್) ಇನ್ಸ್ಟಿಟ್ಯೂಟ್ ಆಫ್ ಫಿಜಿಯೊಥೆರಪಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಫಿಜಿಯೊಥೆರಪಿ ಸಮ್ಮೇಳನ(ಪರ್ಲ್ ಫಿಜಿಯೊಕಾನ್–2025) ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಫಿಜಿಯೊಥೆರಪಿ ವ್ಯವಸ್ಥೆ ಇಲ್ಲದ ಕಾಲದಲ್ಲಿ ಆಟಗಾರರಿಗೆ ಬಹಳ ತೊಂದರೆ ಇದ್ದವು. ಈಗ ಫಿಜಿಯೊಥೆರಪಿ ಸಾಕಷ್ಟು ಆಧುನೀಕರಣಗೊಂಡಿದ್ದು, ಕ್ರೀಡೆಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದರು. </p>.<p>‘ಇಂದು ಪ್ರತಿ ಆಟಗಾರರು ಫಿಜಿಯೊಥೆರಪಿ ಚಿಕಿತ್ಸೆ ಪಡೆಯುತ್ತಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ 15 ಆಟಗಾರರಿದ್ದು, ಅವರನ್ನು ಸದೃಢಗೊಳಿಸಲು ತೆರೆಮರೆಯಲ್ಲಿ 15ರಿಂದ 20 ಮಂದಿ ಕೆಲಸ ಮಾಡುತ್ತಾರೆ. ಆಟಗಾರರನ್ನು ಸಿದ್ಧಗೊಳಿಸಿ ಮೈದಾನಕ್ಕೆ ತರುವಲ್ಲಿ ಫಿಜಿಯೊಥೆರಪಿಸ್ಟ್ಗಳ ಪಾತ್ರವೂ ಮಹತ್ತರವಾಗಿದೆ’ ಎಂದು ಹೇಳಿದರು.</p>.<p>ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ನಾನು ರಾಜ್ಯಸಭಾ ಸದಸ್ಯನಾಗಿದ್ದ ಸಂದರ್ಭ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸ್ಥಾಪಿಸಬೇಕು ಎಂದು ಹೋರಾಡಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ’ ಎಂದು ಹೇಳಿದರು. </p>.<p>‘ಕೃಷಿ, ಸಂಶೋಧನೆ, ಆರೋಗ್ಯ, ಶಿಕ್ಷಣದ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಲಭಿಸಬೇಕು ಎಂಬ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ’ ಎಂದರು.</p>.<p>ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ನ ಚೇರ್ಮನ್ ಡಾ.ಇಫ್ತಿಕರ್ಅಲಿ, ಕೇಂದ್ರ ಸರ್ಕಾರದ ಫಿಜಿಯೊಥೆರಪಿ ಪ್ರೊಫೆಷನಲ್ ಕೌನ್ಸಿಲ್ನ ಸದಸ್ಯರಾದ ಡಾ.ಅಲಿ ಇರಾನಿ, ಡಾ. ವಿ.ಪಿ.ಗುಪ್ತಾ, ಡಾ.ಆಶಿಶ್ ಕಕ್ಕಡ, ಡಾ.ಕೇತನ ಭಾಟಿಕರ ಮಾತನಾಡಿದರು.</p>.<p>ಕಾಹೇರ್ ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಸಂಜೀವಕುಮಾರ, ಡಾ.ವಿಜಯ ಕಾಗೆ, ಡಾ.ದೀಪಾ ಮೆಟಗುಡ್ಡ ಉಪಸ್ಥಿತರಿದ್ದರು. ಡಾ.ಸಂತೋಷ ಮೆಟಗುಡ್ಡ ಸ್ವಾಗತಿಸಿದರು. ಡಾ. ಗಣೇಶ ಬಿ.ಆರ್. ವಂದಿಸಿದರು.</p>.<p><strong>‘ಗೋವಾದಲ್ಲಿ ಫಿಜಿಯೊಥೆರಪಿ ಮಹಾವಿದ್ಯಾಲಯ’</strong></p><p> ‘ಗೋವಾದಲ್ಲಿ ಶೀಘ್ರ ಫಿಜಿಯೊಥೆರಪಿ ಮಹಾವಿದ್ಯಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯವಿರುವ ಆಸ್ಪತ್ರೆ ತರಬೇತಿ ಕೇಂದ್ರದ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಚಿಕಿತ್ಸೆ ತರಬೇತಿ ನೀಡುವುದು ನಮ್ಮ ಧ್ಯೇಯ’ ಎಂದು ಕೋರೆ ಹೇಳಿದರು.</p>.<div><blockquote>ಹುಬ್ಬಳ್ಳಿಯಲ್ಲಿ ನಿರ್ಮಿಸಿದ 1 ಸಾವಿರ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಶೀಘ್ರವೇ ಜನಸೇವೆಗೆ ಅರ್ಪಿಸಲಾಗುವುದು </blockquote><span class="attribution">-ಪ್ರಭಾಕರ ಕೋರೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>