ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿಭಟಿಸಿದ ಅವರು, ತೋಟಗಾರಿಕೆ ಇಲಾಖೆ ಬಾಗಲಕೋಟೆ ಉಪನಿರ್ದೇಶಕ (ಆಗ ಬೆಳಗಾವಿ ಉಪನಿರ್ದೇಶಕರಾಗಿದ್ದ) ರವೀಂದ್ರ ಹಕಾಟಿ, ಅಥಣಿಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಕಳ್ಳಿಮನಿ, ರಾಯಬಾಗದ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಅಶೋಕ ಕರೆಪ್ಪಗೋಳ, ಅರಭಾವಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾನಂದ ಸವಸುದ್ದಿ ಹಾಗೂ ರಾಯಬಾಗ ಪ್ರಥಮ ದರ್ಜೆ ಸಹಾಯಕ ಕಲ್ಲಪ್ಪ ಗುಡಿಮನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.