‘ಯಾವ ಸಮುದಾಯ ಎಷ್ಟು ಮೀಸಲಾತಿ ಕೇಳುವುದೋ ಅದನ್ನು ನೇರವಾಗಿ ಕೊಡಬೇಕು. ಸಚಿವ ಸಂಪುಟ ಸಭೆ ಮುಗಿದ ನಂತರ ಮುಖ್ಯಮಂತ್ರಿ ನೇರವಾಗಿ, ಯಾರಿಗೆ ಏನೇನು ಕೊಟ್ಟಿದ್ದೇವೆ ಎಂದು ಹೇಳಬೇಕಿತ್ತು. ಆದರೆ, ತಾವೂ ಮೌನವಾಗಿದ್ದು ಎಲ್ಲರನ್ನೂ ಗೊಂದಲದಲ್ಲಿ ಇರಿಸಿದ್ದಾರೆ. ಯಾರಿಗೆ ನ್ಯಾಯ ನೀಡಿದ್ದೇವೆ ಎಂದು ಹೇಳಲು ಬಿಜೆಪಿ ಮುಖಂಡರು ಮಾತ್ರವಲ್ಲ; ಮುಖ್ಯಮಂತ್ರಿ ಅವರಿಗೂ ಧೈರ್ಯ ಇಲ್ಲ’ ಎಂದು ಟೀಕಿಸಿದರು.