<p><strong>ಚನ್ನಮ್ಮನ ಕಿತ್ತೂರು</strong>: ತಾಲ್ಲೂಕಿನ ತೇಗೂರು ಗ್ರಾಮದಿಂದ ನೆರೆಯ ಖಾನಾಪುರ ತಾಲ್ಲೂಕಿನ ಗಂದಿಗವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂದಾಜು ಎರಡು ಕಿ.ಮೀ ಜಿಲ್ಲಾ ಮುಖ್ಯರಸ್ತೆ ಒಮ್ಮೆಯೂ ಡಾಂಬರೀಕರಣ ಕಂಡಿಲ್ಲ. ಈ ರಸ್ತೆಯ ಮೂಲಕ ಸಂಚಾರ ಮಾಡುವ ಪ್ರಯಾಣಿಕರು ತೀವ್ರ ಪ್ರಯಾಸ ಪಡುವಂತಾಗಿದೆ.</p><p>‘ಕಿತ್ತೂರಿನ ಪಂಚಾಯತ್ರಾಜ್ ಇಲಾಖೆ ಅಧಿಕಾರಿ ಕೇಳಿದರೆ, ತೇಗೂರು ಕೊನೆಯ ಹದ್ದಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ. ಆ ಭಾಗದ ಅಧಿಕಾರಿಗಳನ್ನು ಕೇಳಿದರೆ, ನಾವೂ ನಮ್ಮ ಹದ್ದಿಯವರೆಗೆ ರಸ್ತೆ ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ. ಅಧಿಕಾರಿಗಳ ಈ ಮಾತಿನಿಂದಾಗಿ ಈ ರಸ್ತೆ ಕರ್ನಾಟಕದಲ್ಲಿ, ಅದೂ ಬೆಳಗಾವಿ ಜಿಲ್ಲೆಯಲ್ಲಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.</p><p><strong>ರಾಜಬೀದಿ ಹೆಗ್ಗಳಿಕೆ:</strong> ‘ಕಿತ್ತೂರು ಸಂಸ್ಥಾನ ಕಾಲದಲ್ಲಿ ತೇಗೂರು- ಗಂದಿಗವಾಡ ರಸ್ತೆ ರಾಜಬೀದಿಯಾಗಿ ಬೀಗಿತ್ತು. ಸುಮಾರು 80 ಅಡಿ ರಸ್ತೆ ಇದಾಗಿತ್ತು. ಪ್ರಾಂತೀಯ ಕಚೇರಿ ಗಂದಿಗವಾಡ ಗ್ರಾಮದಲ್ಲಿತ್ತು’ ಎನ್ನುತ್ತಾರೆ ಗ್ರಾಮಸ್ಥರಾದ ಎಂ. ಎಂ. ರಾಜೀಬಾಯಿ.</p><p>ಇಂತಹ ಪ್ರಮುಖ ರಸ್ತೆಯು ಸ್ವಾತಂತ್ರ್ಯಾನಂತರ ಆಳುವವರ ನಿರ್ಲಕ್ಷ್ಯದಿಂದಾಗಿ ಡಾಂಬರೀಕರಣ ಆಗಿಲ್ಲ. ಇದರ ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುವ ಪ್ರಯಾಣಿಕರು ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಸಾರ್ವಜನಿಕರ ಹಿತ ಬಯಸುವ ಸರ್ಕಾರ, ಈ ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.</p><p>‘ಮಣ್ಣಿನಿಂದ ಕೂಡಿರುವ ವಿಸ್ತಾರವಾದ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಲ್ಲುಗಳು ಎದ್ದಿವೆ. ವಾಹನದ ದೂಳು ವಾಹನದೆತ್ತರಕ್ಕೂ ಏಳುತ್ತದೆ. ಬೈಕ್ ಸವಾರರಿಗೆ ಇದರಿಂದ ಹೆಚ್ಚು ಕಿರಿ ಕಿರಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ಡಾಂಬರೀಕರಣಕ್ಕೆ ಮುಂದಾಗಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ಸಂಘದ ಅಧ್ಯಕ್ಷ ಬಸವರಾಜ ಭಂಗಿ.</p><p>ಈ ಬಗ್ಗೆ ಮಾಹಿತಿ ಪಡೆಯಲು ಖಾನಾಪುರ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆ ಕಿರಿಯ ಎಂಜಿನಿಯರ್ ಸಂಪರ್ಕಿಸಿದರೆ ಲಭ್ಯವಾಗಲಿಲ್ಲ.</p>.<div><blockquote>ಚನ್ನಮ್ಮನ ಕಿತ್ತೂರಿಗೆ ವ್ಯಾಪಾರ, ವಹಿವಾಟಿನ ಒಡನಾಟ ಹೆಚ್ಚಿದೆ. ಹೀಗಾಗಿ ಈ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳದಿದ್ದರೆ ಗಂದಿಗವಾಡ-ತೇಗೂರು ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು.</blockquote><span class="attribution">ಎಂ. ಎಂ. ರಾಜೀಬಾಯಿ, ಗಂದಿಗವಾಡ ಗ್ರಾಮಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ತಾಲ್ಲೂಕಿನ ತೇಗೂರು ಗ್ರಾಮದಿಂದ ನೆರೆಯ ಖಾನಾಪುರ ತಾಲ್ಲೂಕಿನ ಗಂದಿಗವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂದಾಜು ಎರಡು ಕಿ.ಮೀ ಜಿಲ್ಲಾ ಮುಖ್ಯರಸ್ತೆ ಒಮ್ಮೆಯೂ ಡಾಂಬರೀಕರಣ ಕಂಡಿಲ್ಲ. ಈ ರಸ್ತೆಯ ಮೂಲಕ ಸಂಚಾರ ಮಾಡುವ ಪ್ರಯಾಣಿಕರು ತೀವ್ರ ಪ್ರಯಾಸ ಪಡುವಂತಾಗಿದೆ.</p><p>‘ಕಿತ್ತೂರಿನ ಪಂಚಾಯತ್ರಾಜ್ ಇಲಾಖೆ ಅಧಿಕಾರಿ ಕೇಳಿದರೆ, ತೇಗೂರು ಕೊನೆಯ ಹದ್ದಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ. ಆ ಭಾಗದ ಅಧಿಕಾರಿಗಳನ್ನು ಕೇಳಿದರೆ, ನಾವೂ ನಮ್ಮ ಹದ್ದಿಯವರೆಗೆ ರಸ್ತೆ ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ. ಅಧಿಕಾರಿಗಳ ಈ ಮಾತಿನಿಂದಾಗಿ ಈ ರಸ್ತೆ ಕರ್ನಾಟಕದಲ್ಲಿ, ಅದೂ ಬೆಳಗಾವಿ ಜಿಲ್ಲೆಯಲ್ಲಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.</p><p><strong>ರಾಜಬೀದಿ ಹೆಗ್ಗಳಿಕೆ:</strong> ‘ಕಿತ್ತೂರು ಸಂಸ್ಥಾನ ಕಾಲದಲ್ಲಿ ತೇಗೂರು- ಗಂದಿಗವಾಡ ರಸ್ತೆ ರಾಜಬೀದಿಯಾಗಿ ಬೀಗಿತ್ತು. ಸುಮಾರು 80 ಅಡಿ ರಸ್ತೆ ಇದಾಗಿತ್ತು. ಪ್ರಾಂತೀಯ ಕಚೇರಿ ಗಂದಿಗವಾಡ ಗ್ರಾಮದಲ್ಲಿತ್ತು’ ಎನ್ನುತ್ತಾರೆ ಗ್ರಾಮಸ್ಥರಾದ ಎಂ. ಎಂ. ರಾಜೀಬಾಯಿ.</p><p>ಇಂತಹ ಪ್ರಮುಖ ರಸ್ತೆಯು ಸ್ವಾತಂತ್ರ್ಯಾನಂತರ ಆಳುವವರ ನಿರ್ಲಕ್ಷ್ಯದಿಂದಾಗಿ ಡಾಂಬರೀಕರಣ ಆಗಿಲ್ಲ. ಇದರ ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುವ ಪ್ರಯಾಣಿಕರು ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಸಾರ್ವಜನಿಕರ ಹಿತ ಬಯಸುವ ಸರ್ಕಾರ, ಈ ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.</p><p>‘ಮಣ್ಣಿನಿಂದ ಕೂಡಿರುವ ವಿಸ್ತಾರವಾದ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಲ್ಲುಗಳು ಎದ್ದಿವೆ. ವಾಹನದ ದೂಳು ವಾಹನದೆತ್ತರಕ್ಕೂ ಏಳುತ್ತದೆ. ಬೈಕ್ ಸವಾರರಿಗೆ ಇದರಿಂದ ಹೆಚ್ಚು ಕಿರಿ ಕಿರಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ಡಾಂಬರೀಕರಣಕ್ಕೆ ಮುಂದಾಗಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ಸಂಘದ ಅಧ್ಯಕ್ಷ ಬಸವರಾಜ ಭಂಗಿ.</p><p>ಈ ಬಗ್ಗೆ ಮಾಹಿತಿ ಪಡೆಯಲು ಖಾನಾಪುರ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆ ಕಿರಿಯ ಎಂಜಿನಿಯರ್ ಸಂಪರ್ಕಿಸಿದರೆ ಲಭ್ಯವಾಗಲಿಲ್ಲ.</p>.<div><blockquote>ಚನ್ನಮ್ಮನ ಕಿತ್ತೂರಿಗೆ ವ್ಯಾಪಾರ, ವಹಿವಾಟಿನ ಒಡನಾಟ ಹೆಚ್ಚಿದೆ. ಹೀಗಾಗಿ ಈ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳದಿದ್ದರೆ ಗಂದಿಗವಾಡ-ತೇಗೂರು ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು.</blockquote><span class="attribution">ಎಂ. ಎಂ. ರಾಜೀಬಾಯಿ, ಗಂದಿಗವಾಡ ಗ್ರಾಮಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>