<p><strong>ಅರಕಲಗೂಡು (ಹಾಸನ ಜಿಲ್ಲೆ):</strong> ಗಂಭೀರ ಸ್ವರೂಪದ ರಕ್ತದ ಕ್ಯಾನ್ಸರ್ ‘ಅಕ್ಯೂಟ್ ಮೈಲಾಯ್ಡ್ ಲೂಕೆಮಿಯಾಗೆ (ಎಎಂಎಲ್) ಹೊಸ ಚಿಕಿತ್ಸಾ ವಿಧಾನವನ್ನು ತಜ್ಞರ ತಂಡ ಕಂಡುಹಿಡಿದಿದೆ.</p>.<p>ಪಟ್ಟಣದ ವಿಜ್ಞಾನಿ ಹಾಗೂ ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ.ಕೋಮಲ್ ಕುಮಾರ್ ಜವರಪ್ಪ ಅವರನ್ನು ಒಳಗೊಂಡಿದ್ದ ಅಂತರರಾಷ್ಟ್ರೀಯ ಸಂಶೋಧನಾ ತಂಡ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. </p>.<p>‘ಫಿನ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ನ ವಿಜ್ಞಾನಿಗಳಿಂದ ನಡೆಸಲಾದ ಸಂಶೋಧನೆಯಲ್ಲಿ, ‘ಎಂಐಕೆ 665’ ಮತ್ತು ‘ವೆನೆಟೋಕ್ಲ್ಯಾಕ್ಸ್’ ಔಷಧಗಳ ಸಂಯೋಜನೆಯು ಎಎಂಎಲ್ ರೋಗಿಗಳಿಗೆ ಚಿಕಿತ್ಸೆಗೆ ಒಳಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ’ ಎಂದು ಕಂಡುಬಂದಿದೆ.</p>.<p>‘ಎಎಂಎಲ್ ಚಿಕಿತ್ಸೆಯ ಅಡೆತಡೆ ಎಂದರೆ ರೋಗಿಗಳು ಸರಿಯಾಗಿ ಸ್ಪಂದಿಸದಿರುವುದು. ಈಗಿನ ಸಂಶೋಧನೆಯಲ್ಲಿ, ಚಿಕಿತ್ಸೆ ಪರಿಣಾಮಕಾರಿಯಾಗದ ರೋಗಿಗಳಲ್ಲಿ ಎಬಿಸಿಬಿ1 ಎಂಬ ವಂಶವಾಹಿ ಮಟ್ಟ, ಬಿಸಿಎಲ್–ಎಕ್ಸ್ಎಲ್ ಎಂಬ ಪ್ರೋಟೀನ್ ಸಿಗ್ನಲ್ ಅಧಿಕವಾಗಿ ಕಂಡುಬಂದಿದೆ. ಈ ಹೊಸ ಔಷಧ ಸಂಯೋಜನೆ ರೋಗ ನಿರ್ವಹಣೆಗೆ ಆಶಾಕಿರಣವಾಗಿದೆ’ ಎಂದು ಕೋಮಲ್ಕುಮಾರ್ ತಿಳಿಸಿದರು.</p>.<p>ರಕ್ತದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದು ಮುಖ್ಯ ಸಾಧನೆಯಾಗಿದೆ. ಈ ಕುರಿತ ಸಂಶೋಧನಾ ಲೇಖನ ನೆದರ್ಲ್ಯಾಂಡ್ನ ವೈಜ್ಞಾನಿಕ ಜರ್ನಲ್ ‘ಮಾಲಿಕ್ಯುಲರ್ ಆಂಕಾಲಜಿ’ಯಲ್ಲಿ ಪ್ರಕಟವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು (ಹಾಸನ ಜಿಲ್ಲೆ):</strong> ಗಂಭೀರ ಸ್ವರೂಪದ ರಕ್ತದ ಕ್ಯಾನ್ಸರ್ ‘ಅಕ್ಯೂಟ್ ಮೈಲಾಯ್ಡ್ ಲೂಕೆಮಿಯಾಗೆ (ಎಎಂಎಲ್) ಹೊಸ ಚಿಕಿತ್ಸಾ ವಿಧಾನವನ್ನು ತಜ್ಞರ ತಂಡ ಕಂಡುಹಿಡಿದಿದೆ.</p>.<p>ಪಟ್ಟಣದ ವಿಜ್ಞಾನಿ ಹಾಗೂ ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ.ಕೋಮಲ್ ಕುಮಾರ್ ಜವರಪ್ಪ ಅವರನ್ನು ಒಳಗೊಂಡಿದ್ದ ಅಂತರರಾಷ್ಟ್ರೀಯ ಸಂಶೋಧನಾ ತಂಡ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. </p>.<p>‘ಫಿನ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ನ ವಿಜ್ಞಾನಿಗಳಿಂದ ನಡೆಸಲಾದ ಸಂಶೋಧನೆಯಲ್ಲಿ, ‘ಎಂಐಕೆ 665’ ಮತ್ತು ‘ವೆನೆಟೋಕ್ಲ್ಯಾಕ್ಸ್’ ಔಷಧಗಳ ಸಂಯೋಜನೆಯು ಎಎಂಎಲ್ ರೋಗಿಗಳಿಗೆ ಚಿಕಿತ್ಸೆಗೆ ಒಳಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ’ ಎಂದು ಕಂಡುಬಂದಿದೆ.</p>.<p>‘ಎಎಂಎಲ್ ಚಿಕಿತ್ಸೆಯ ಅಡೆತಡೆ ಎಂದರೆ ರೋಗಿಗಳು ಸರಿಯಾಗಿ ಸ್ಪಂದಿಸದಿರುವುದು. ಈಗಿನ ಸಂಶೋಧನೆಯಲ್ಲಿ, ಚಿಕಿತ್ಸೆ ಪರಿಣಾಮಕಾರಿಯಾಗದ ರೋಗಿಗಳಲ್ಲಿ ಎಬಿಸಿಬಿ1 ಎಂಬ ವಂಶವಾಹಿ ಮಟ್ಟ, ಬಿಸಿಎಲ್–ಎಕ್ಸ್ಎಲ್ ಎಂಬ ಪ್ರೋಟೀನ್ ಸಿಗ್ನಲ್ ಅಧಿಕವಾಗಿ ಕಂಡುಬಂದಿದೆ. ಈ ಹೊಸ ಔಷಧ ಸಂಯೋಜನೆ ರೋಗ ನಿರ್ವಹಣೆಗೆ ಆಶಾಕಿರಣವಾಗಿದೆ’ ಎಂದು ಕೋಮಲ್ಕುಮಾರ್ ತಿಳಿಸಿದರು.</p>.<p>ರಕ್ತದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದು ಮುಖ್ಯ ಸಾಧನೆಯಾಗಿದೆ. ಈ ಕುರಿತ ಸಂಶೋಧನಾ ಲೇಖನ ನೆದರ್ಲ್ಯಾಂಡ್ನ ವೈಜ್ಞಾನಿಕ ಜರ್ನಲ್ ‘ಮಾಲಿಕ್ಯುಲರ್ ಆಂಕಾಲಜಿ’ಯಲ್ಲಿ ಪ್ರಕಟವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>