<p><strong>ಸವದತ್ತಿ (ಬೆಳಗಾವಿ ಜಿಲ್ಲೆ): </strong>ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ, ವಾಲ್ಮೀಕಿ ಭವನ ನಿರ್ಮಿಸಲು ತೆರೆದ ಸಂಪನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.</p>.<p>ಶಂಭುಲಿಂಗಪ್ಪ ಗುಡಿ ಅವರ ನಾಲ್ಕು ವರ್ಷದ ಪುತ್ರ ಶ್ಲೋಕ ಹಾಗೂ ಪ್ರಕಾಶ ಸಾಲುಂಕೆ ಅವರ ನಾಲ್ಕು ವರ್ಷದ ಪುತ್ರ ಚಿದಾನಂದ ಸಾವನ್ನಪ್ಪಿದ ಮಕ್ಕಳು.</p>.<p>ಸವದತ್ತಿ ಸಮೀಪದ ಗುರ್ಲ ಹೊಸೂರಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದೆ. ಇದಕ್ಕೆ ನೀರು ಪೂರೈಸಲು ದೊಡ್ಡ ಸಂಪ ಕಟ್ಟಿ ಹಾಗೇ ಬಾಡಲಾಗಿದೆ.</p>.<p>ಶ್ಲೋಕ ಹಾಗೂ ಚಿದಾನಂದ ಆಟವಾಡುತ್ತ ಹೋಗಿ ಸಂಪಿನಲ್ಲಿ ಬಿದ್ದರು. ಈ ಸಂಪ ಎರಡು ಕಟ್ಟಡಗಳ ಸಣ್ಣ ಸಂದಿಯಲ್ಲಿ ಇರುವ ಕಾರಣ ಮಕ್ಕಳು ಬಿದ್ದಿದ್ದನ್ನು ಯಾರೂ ಗಮನಿಸಿಲ್ಲ.</p>.<p>ಇಬ್ಬರೂ ಮಕ್ಕಳು ಗ್ರಾಮದ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಓದುತ್ತಿದ್ದರು. ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬಾರದ್ದನ್ನು ಕಂಡು ಪಾಲಕರು ಆತಂಕದಿಂದ ಹುಡುಕಾಡಿದರು. ಆಗ ಮಕ್ಕಳು ಸಂಪಿನಲ್ಲಿ ಬಿದ್ದಿದ್ದು ಗೊತ್ತಾಗಿದೆ.</p>.<p>ಸವದತ್ತಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ (ಬೆಳಗಾವಿ ಜಿಲ್ಲೆ): </strong>ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ, ವಾಲ್ಮೀಕಿ ಭವನ ನಿರ್ಮಿಸಲು ತೆರೆದ ಸಂಪನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.</p>.<p>ಶಂಭುಲಿಂಗಪ್ಪ ಗುಡಿ ಅವರ ನಾಲ್ಕು ವರ್ಷದ ಪುತ್ರ ಶ್ಲೋಕ ಹಾಗೂ ಪ್ರಕಾಶ ಸಾಲುಂಕೆ ಅವರ ನಾಲ್ಕು ವರ್ಷದ ಪುತ್ರ ಚಿದಾನಂದ ಸಾವನ್ನಪ್ಪಿದ ಮಕ್ಕಳು.</p>.<p>ಸವದತ್ತಿ ಸಮೀಪದ ಗುರ್ಲ ಹೊಸೂರಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದೆ. ಇದಕ್ಕೆ ನೀರು ಪೂರೈಸಲು ದೊಡ್ಡ ಸಂಪ ಕಟ್ಟಿ ಹಾಗೇ ಬಾಡಲಾಗಿದೆ.</p>.<p>ಶ್ಲೋಕ ಹಾಗೂ ಚಿದಾನಂದ ಆಟವಾಡುತ್ತ ಹೋಗಿ ಸಂಪಿನಲ್ಲಿ ಬಿದ್ದರು. ಈ ಸಂಪ ಎರಡು ಕಟ್ಟಡಗಳ ಸಣ್ಣ ಸಂದಿಯಲ್ಲಿ ಇರುವ ಕಾರಣ ಮಕ್ಕಳು ಬಿದ್ದಿದ್ದನ್ನು ಯಾರೂ ಗಮನಿಸಿಲ್ಲ.</p>.<p>ಇಬ್ಬರೂ ಮಕ್ಕಳು ಗ್ರಾಮದ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಓದುತ್ತಿದ್ದರು. ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬಾರದ್ದನ್ನು ಕಂಡು ಪಾಲಕರು ಆತಂಕದಿಂದ ಹುಡುಕಾಡಿದರು. ಆಗ ಮಕ್ಕಳು ಸಂಪಿನಲ್ಲಿ ಬಿದ್ದಿದ್ದು ಗೊತ್ತಾಗಿದೆ.</p>.<p>ಸವದತ್ತಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>