ಹೊಸಪೇಟೆ: ಇಲ್ಲಿನ ಬಿ.ಜೆ.ಎಸ್. ಟೊಯೊಟಾ ಶೋ ರೂಂನ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಸಿಬ್ಬಂದಿ, ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು. ರಕ್ತ ಕೊಟ್ಟವರಿಗೆ ವಸಂತಿದೇವಿ ಬಲ್ದೋಟ ರಕ್ತನಿಧಿ ಕೇಂದ್ರದ ಡಾ. ಸುಲೋಚನಾ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಇದಕ್ಕೂ ಮುನ್ನ ಶೋ ರೂಂ ನಿರ್ದೇಶಕ ಎಸ್.ಬಿ. ಜೈರಾಜ ಸಿಂಗ್ ಶಿಬಿರ ಉದ್ಘಾಟಿಸಿ, ‘ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿ ವರ್ಷ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಈ ಸಲ ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.
ಶೋ ರೂಂ ಮುಖ್ಯಸ್ಥೆ ಲಕ್ಷ್ಮಿ ಜೈರಾಜ್ ಸಿಂಗ್, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕಿ ಸಾರಾ ಶಕೀಲ್, ರಕ್ತನಿಧಿ ಕೇಂದ್ರದ ಪವನ್, ಬದರಿ, ರಮೇಶ, ಶ್ರೀನಿವಾಸ, ಶಿವರಾಜ, ಸ್ವರೂಪ, ನಿರ್ಮಲಾ, ಮಮತಾ ಇದ್ದರು.