2ಎ ಮೀಸಲಾತಿಗೆ ಆಗ್ರಹಿಸಿ ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆಯಲ್ಲಿ ಭಾನುವಾರ ಇಟ್ಟಿಗಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೀಸಲಾತಿ ಹೋರಾಟದಲ್ಲಿ ಮೋರಿಗೇರಿಯ ತುಪ್ಪದ ಈಶಪ್ಪನವರ ಬಲಿದಾನ ಆಗಿದೆ. ಪಾದಯಾತ್ರೆ ಬೆಂಗಳೂರು ತಲುಪುವ ವೇಳೆ ಇನ್ನಷ್ಟು ಸಾವು ನೋವು ಸಂಭವಿಸಬಹುದು. ಮೀಸಲಾತಿಗಾಗಿ ಸಮುದಾಯವನ್ನು ಹೋರಾಟಕ್ಕೆ ಇಳಿಸಿದ ಸರ್ಕಾರವೇ ಇದರ ಹೊಣೆ ಹೊರಬೇಕು ಎಂದರು.