<p><strong>ವಿಧಾನಸಭೆ</strong>: ಹಿಂದಿನ ಸರ್ಕಾರ ಘೋಷಿಸಿದ್ದ 11 ನಿಗಮಗಳ ನೋಂದಣಿಯೇ ಆಗಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.</p>.<p>ಕಾಂಗ್ರೆಸ್ನ ಸಿ.ಎಸ್. ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ಧೀರಜ್ ಮುನಿರಾಜು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಹಿಂದಿನ ಸರ್ಕಾರ ಹೋದಲ್ಲಿ, ಬಂದಲ್ಲಿ ನಿಗಮಗಳ ಘೋಷಣೆ ಮಾಡಿತ್ತು. ನೋಂದಣಿ, ಅನುದಾನ ನಿಗದಿಗೆ ಕ್ರಮ ಕೈಗೊಂಡಿರಲಿಲ್ಲ. ಈಗ ನಿಗಮಗಳ ನೋಂದಣಿ ಆರಂಭಿಸಿದ್ದು, ಅನುದಾನವನ್ನೂ ಒದಗಿಸಲಾಗುತ್ತಿದೆ’ ಎಂದರು.</p>.<p>‘ಮರಾಠಾ ಅಭಿವೃದ್ಧಿ ನಿಗಮದ ನೋಂದಣಿಯೇ ಆಗಿಲ್ಲ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನೇ ನೀಡಿಲ್ಲ. ಸಣ್ಣ ಸಮುದಾಯಗಳಿಗೆ ನೆರವಿಗೆ ನಿಲ್ಲದಿದ್ದರೆ ಹೇಗೆ’ ಎಂದು ಪುಟ್ಟರಂಗ ಶೆಟ್ಟಿ ಕೇಳಿದರು.</p>.<p>‘ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ತಾಲ್ಲೂಕಿಗೆ ಒಂದು ಕೊಳವೆಬಾವಿ ನೀಡಲಾಗುತ್ತಿದೆ. ಹಂಚಿಕೆ ಮಾಡುವುದು ಹೇಗೆ’ ಎಂದು ಧೀರಜ್ ಪ್ರಶ್ನಿಸಿದರು.</p>.<p>15 ಸಾವಿರ ಕೊಳವೆ ಬಾವಿ: ನಾಲ್ಕು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದ ಪ್ರಗತಿ ಕುಂಠಿತವಾಗಿದೆ. ಬಾಕಿ ಇರುವ 15,000 ಕೊಳವೆಬಾವಿಗಳನ್ನು 2024ರ ಮಾರ್ಚ್ ಅಂತ್ಯದೊಳಗೆ ಕೊರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಧಾನಸಭೆ</strong>: ಹಿಂದಿನ ಸರ್ಕಾರ ಘೋಷಿಸಿದ್ದ 11 ನಿಗಮಗಳ ನೋಂದಣಿಯೇ ಆಗಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.</p>.<p>ಕಾಂಗ್ರೆಸ್ನ ಸಿ.ಎಸ್. ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ಧೀರಜ್ ಮುನಿರಾಜು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಹಿಂದಿನ ಸರ್ಕಾರ ಹೋದಲ್ಲಿ, ಬಂದಲ್ಲಿ ನಿಗಮಗಳ ಘೋಷಣೆ ಮಾಡಿತ್ತು. ನೋಂದಣಿ, ಅನುದಾನ ನಿಗದಿಗೆ ಕ್ರಮ ಕೈಗೊಂಡಿರಲಿಲ್ಲ. ಈಗ ನಿಗಮಗಳ ನೋಂದಣಿ ಆರಂಭಿಸಿದ್ದು, ಅನುದಾನವನ್ನೂ ಒದಗಿಸಲಾಗುತ್ತಿದೆ’ ಎಂದರು.</p>.<p>‘ಮರಾಠಾ ಅಭಿವೃದ್ಧಿ ನಿಗಮದ ನೋಂದಣಿಯೇ ಆಗಿಲ್ಲ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನೇ ನೀಡಿಲ್ಲ. ಸಣ್ಣ ಸಮುದಾಯಗಳಿಗೆ ನೆರವಿಗೆ ನಿಲ್ಲದಿದ್ದರೆ ಹೇಗೆ’ ಎಂದು ಪುಟ್ಟರಂಗ ಶೆಟ್ಟಿ ಕೇಳಿದರು.</p>.<p>‘ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ತಾಲ್ಲೂಕಿಗೆ ಒಂದು ಕೊಳವೆಬಾವಿ ನೀಡಲಾಗುತ್ತಿದೆ. ಹಂಚಿಕೆ ಮಾಡುವುದು ಹೇಗೆ’ ಎಂದು ಧೀರಜ್ ಪ್ರಶ್ನಿಸಿದರು.</p>.<p>15 ಸಾವಿರ ಕೊಳವೆ ಬಾವಿ: ನಾಲ್ಕು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದ ಪ್ರಗತಿ ಕುಂಠಿತವಾಗಿದೆ. ಬಾಕಿ ಇರುವ 15,000 ಕೊಳವೆಬಾವಿಗಳನ್ನು 2024ರ ಮಾರ್ಚ್ ಅಂತ್ಯದೊಳಗೆ ಕೊರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>