‘ಸರ್ಕಾರದ ಮೇಲೆ ಒತ್ತಡ ತಂದ ಪ್ರಾಧ್ಯಾಪಕರಿಗೆ ಈಗಾಗಲೇ ಹಿಂಬಾಕಿ ಪಾವತಿಸಲಾಗಿದೆ. ಕೆಲವರು ನ್ಯಾಯಾಲಯದ ಮೊರೆ ಹೋಗಿ, ಕೋರ್ಟ್ ಆದೇಶದ ಮೂಲಕ ಬಾಕಿ ಪಡೆದಿದ್ದಾರೆ. ಆದರೆ, 2012ಕ್ಕಿಂತ ಮುನ್ನ ನಿವೃತ್ತರಾದ ಪ್ರಾಧ್ಯಾಪಕರು ಒಟ್ಟಾಗಿ ಸೇರಿ, ಸರ್ಕಾರದ ಮೇಲೆ ಒತ್ತಡ ಹೇರುವುದಾಗಲಿ, ನ್ಯಾಯಾಲಯದ ಮೊರೆ ಹೋಗುವುದಾಗಲಿ ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದ್ದಾರೆ.