‘ನಗರದಲ್ಲಿ ಎಲ್ಲೂ ಕಸದ ರಾಶಿ ಕಾಣಿಸಿಕೊಳ್ಳಬಾರದು’ ಎಂದು ನ್ಯಾಯಾಲಯ ಕಟ್ಟು ನಿಟ್ಟಾಗಿ ಆದೇಶ ಮಾಡಿದ ಬಳಿಕ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಚುರುಕಾದರು. ಕಸ ತೆರವುಗೊಳಿಸಿದ ಜಾಗದಲ್ಲಿ ಜನ
ಮತ್ತೆ ತ್ಯಾಜ್ಯ ಸುರಿಯುವುದನ್ನು ತಡೆಯಲು, ಅಲ್ಲಿ ರಂಗೋಲಿ ಬಿಡಿಸುವ ವಿನೂತನ ಪ್ರಯತ್ನಕ್ಕೆ ಪಾಲಿಕೆ ನವೆಂಬರ್ನಲ್ಲಿ ಕೈ ಹಾಕಿತು. ‘ಅಗ್ಲಿ ಇಂಡಿಯನ್ಸ್’ ಸರ್ಕಾರೇತರ ಸಂಘಟನೆ ನೆರವಿನಿಂದ ನಡೆಸಿದ ಈ ಪ್ರಯತ್ನ ಸಾಕಷ್ಟು ಯಶಸ್ವಿಯೂ ಆಯಿತು.