ದೊಡ್ಡಬೆಟ್ಟಹಳ್ಳಿಯ ವ್ಯಕ್ತಿಯೊಬ್ಬರು ನೀಡಿರುವ ದೂರನ್ನು ಆಧರಿಸಿ, ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಬಳಿಕ ಪ್ರಕರಣ ದಾಖಲು ಮಾಡಲಾಗಿದೆ. ಯಲಹಂಕ ತಾಲ್ಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕಿಯಾಗಿರುವ ಬಿ.ಕೆ. ಆಶಾ ಅವರ ಅನ್ನಪೂರ್ಣೇಶ್ವರಿನಗರದ ಆರೋಗ್ಯ ಬಡಾವಣೆಯ ಮನೆ, ಕಂದಾಯ ದಾಖಲೆಗಳ ವಿಭಾಗದ ಶಿರಸ್ತೇದಾರ್ ಪಿ.ಎಸ್.ಆರ್. ಪ್ರಸಾದ್ ಅವರ ತುಮಕೂರಿನ ವಿಜಯನಗರದ ಮನೆ ಮತ್ತು ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಡಾಲರ್ಸ್ ಕಾಲೋನಿಯಲ್ಲಿರುವ ಬಿಲ್ಡರ್ ಕೆ.ವಿ. ನಾಯ್ಡು ಎಂಬುವರ ಮನೆಗಳಲ್ಲಿ ಶೋಧ ನಡೆಸಲಾಗಿದೆ.