ಪರಾರಿಯಾಗಲು ಯತ್ನಿಸಿದ್ದ ನಟ ನಾಗಭೂಷಣ!
ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ್ದ ನಟ ನಾಗಭೂಷಣ ಅವರನ್ನು ಸ್ಥಳೀಯರೇ ತಡೆದು ನಿಲ್ಲಿಸಿ, ಪೊಲೀಸರ ಹೊಯ್ಸಳ ವಾಹನದಲ್ಲಿ ಹತ್ತಿಸಿ ಕಳುಹಿಸಿದ್ದಾರೆ.
'ನಾಗಭೂಷಣ ಅತೀ ವೇಗವಾಗಿ ಕಾರು ಚಲಾಯಿಸಿದ್ದ. ದಂಪತಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೊರಟಿದ್ದರು. ಅವರಿಗೆ ಮೊದಲು ಕಾರು ಗುದ್ದಿತ್ತು. ನಂತರ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು' ಎಂದು ಸ್ಥಳೀಯರು ತಿಳಿಸಿದ್ದಾರೆ.
'ಅಪಘಾತದ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ನಾಗಭೂಷಣ ಪರಾರಿಯಾಗಲು ಯತ್ನಿಸಿದ್ದ. ಆತನನ್ನು ತಡೆದು ನಿಲ್ಲಿಸಿದ್ದೆವು. ಆತ, ಕಪ್ಪು ಜರ್ಕಿನ್ ಹಾಕಿಕೊಂಡಿದ್ದ. ಜನರು ಹೆಚ್ಚು ಸೇರುತ್ತಿದ್ದಂತೆ ಆತ ಮಾಸ್ಕ್ ಹಾಕಿಕೊಂಡ. ನಂತರ, ಹೊಯ್ಸಳ ವಾಹನ ಸ್ಥಳಕ್ಕೆ ಬಂತು. ಆತನನ್ನು ವಾಹನದಲ್ಲಿ ಕೂರಿಸಿ ಠಾಣೆಗೆ ಕಳುಹಿಸಿದೆವು' ಎಂದು ಹೇಳಿದ್ದಾರೆ.