‘ವಂಚನೆ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಂಪನಿಗೆ ₹ 10,000 ಕಟ್ಟಿದ್ದರೂ ಅವರಿಗೆಲ್ಲ ಹಣ ನೀಡಲು ಆಂಧ್ರಪ್ರದೇಶ ಸರ್ಕಾರವೇ ತೀರ್ಮಾನಿಸಿದೆ. ಕೆಲ ದಿನಗಳ ಬಳಿಕ ₹20,000 ಪಾವತಿಸಿದವರಿಗೂ ಹಣ ನೀಡುವ ಭರವಸೆಯನ್ನೂ ನೀಡಿದೆ. ಇದಕ್ಕೆ ಅಲ್ಲಿಯ ಸಂತ್ರಸ್ತರ ಹೋರಾಟವೇ ಕಾರಣ. ನಮ್ಮಲ್ಲಿಯೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಸಮಾವೇಶದ ಮೂಲಕ ಹೋರಾಟ ಆರಂಭಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.