<p><strong>ಬೆಂಗಳೂರು:</strong> ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ಭೀಮ ದಸರಾವನ್ನು ಸರ್ಕಾರ ಆಚರಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ರಾಜ್ಯ ಸಂವಿಧಾನ ಬಳಗದ ಅಧ್ಯಕ್ಷ ಎಸ್. ಜಯಕಾಂತ್ ಚಾಲುಕ್ಯ ಆಗ್ರಹಿಸಿದರು.</p>.<p>ಡಾ.ಬಿ.ಆರ್. ಅಂಬೇಡ್ಕರ್ ಮಹಾಪರಿನಿಬ್ಬಾಣದ ಅಂಗವಾಗಿ ನಾಗಸೇನಾ ಶಾಲೆಯಿಂದ ಶೃಂಗಾರ್ ಪ್ಯಾಲೇಸ್ವರೆಗೆ ಭಗವಾನ್ ಬುದ್ಧ ಮತ್ತು ಅಂಬೇಡ್ಕರ್ ಅವರ ಅಸ್ಥಿಯನ್ನು ಶನಿವಾರ ಮೆರವಣಿಗೆಯಲ್ಲಿ ತಂದು ಚೈತ್ಯಾಲಯ ಮಾದರಿಯಲ್ಲಿ ಇರಿಸಿ ಅವರು ಮಾತನಾಡಿದರು.</p>.<p>ಅಂಬೇಡ್ಕರ್ ಪರಿನಿಬ್ಬಾಣದ ಸಮಯದಲ್ಲಿ ದಸರಾ ಆಚರಿಸಬೇಕು. ದಸರಾ ಮೆರವಣಿಗೆ ರೀತಿಯಲ್ಲೇ ವಿಧಾನಸೌಧದಿಂದ ಅರಮನೆ ಮೈದಾನದವರೆಗೆ ಆನೆ ಮೇಲಿನ ಅಂಬಾರಿಯಲ್ಲಿ ಬಾಬಾಸಾಹೇಬರ ಬಂಗಾರದ ಪುತ್ಥಳಿಯನ್ನು ಇರಿಸಿ ಮೆರವಣಿಗೆ ನಡೆಸಬೇಕು. ಪರಿಶಿಷ್ಟ ಜಾತಿ ಉಪಯೋಜನೆಯ ಅನುದಾನದಲ್ಲಿ ಈ ಹಬ್ಬಕ್ಕೆ ₹3 ಕೋಟಿ ಒದಗಿಸಬೇಕು ಎಂದು ಒತ್ತಾಯಿಸಿದರು. </p>.<p>ಬಂಗಾರದ ಪುತ್ಥಳಿ ನಿರ್ಮಿಸಲು ಪ್ರತಿಯೊಬ್ಬರೂ ಕನಿಷ್ಠ ಒಂದು ರೂಪಾಯಿ ಆದರೂ ನೀಡಬೇಕು. ಸರ್ಕಾರ ಪುತ್ಥಳಿಯನ್ನು ಅನಾವರಣಗೊಳಿಸಬೇಕು ಎಂದು ತಿಳಿಸಿದರು.</p>.<p>ಮುಂಬೈಯ ದಾದರ್ನಲ್ಲಿರುವ ಚೈತ್ಯಭೂಮಿಯ ಮಾದರಿಯಲ್ಲಿ, ಇಲ್ಲಿ ತಾತ್ಕಾಲಿಕ ಚೈತ್ಯಾಲಯ ನಿರ್ಮಿಸಲಾಗಿದೆ. ದಾದರ್ಗೆ ಹೋಗಲು ಸಾಧ್ಯವಾಗದವರು ನಿಬ್ಬಾಣದ ದಿನ ಇಲ್ಲೇ ಭೇಟಿ ನೀಡಲಿ ಎಂಬುದು ಇದರ ಉದ್ದೇಶವಾಗಿದೆ. ದಾದರ್ನಿಂದ ಅಂಬೇಡ್ಕರ್ ಅಸ್ಥಿ, ಶ್ರೀಲಂಕಾದಿಂದ ಬುದ್ಧನ ಅಸ್ಥಿ ತರಲಾಗಿದೆ ಎಂದರು.</p>.<p>ಭಿಕ್ಕುಣಿ ಮೈತ್ರಿ ಮಾತಾಜಿ ಮಾತನಾಡಿ, ‘ಅಂಬೇಡ್ಕರ್ ನೀಡಿದ ಉಡುಗೊರೆಯನ್ನು ನಾವು ಬರೆಯುವಂತಿಲ್ಲ. ಅವರು ನೀಡಿದ ಸಂವಿಧಾನ, ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಇದ್ದರೂ ಭಾರತದಿಂದ ಮರೆಯಾಗಿದ್ದ ಬೌದ್ಧ ಧರ್ಮವನ್ನು ಪುನರ್ಸ್ಥಾಪಿಸಿದ ಕೊಡುಗೆಗಳನ್ನು ಮರೆಯಬಾರದು’ ಎಂದು ಹೇಳಿದರು.</p>.<p>ಬೌದ್ಧ ಭಿಕ್ಕುಗಳಾದ ಭಂತೆ ಬೋಧಿದತ್ತ ಮಹಾಥೇರ, ಭಂತೆ ನಾಗಸೇನ, ಭಿಕ್ಕುಣಿ ಗೌತಮಿ ಮಾತಾಜಿ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.</p>.<p>ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆ, ಹಗಲು ರಾತ್ರಿ ಬುದ್ಧವಂದನೆ, ಭೀಮಗೀತೆ ಗಾಯನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ಭೀಮ ದಸರಾವನ್ನು ಸರ್ಕಾರ ಆಚರಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ರಾಜ್ಯ ಸಂವಿಧಾನ ಬಳಗದ ಅಧ್ಯಕ್ಷ ಎಸ್. ಜಯಕಾಂತ್ ಚಾಲುಕ್ಯ ಆಗ್ರಹಿಸಿದರು.</p>.<p>ಡಾ.ಬಿ.ಆರ್. ಅಂಬೇಡ್ಕರ್ ಮಹಾಪರಿನಿಬ್ಬಾಣದ ಅಂಗವಾಗಿ ನಾಗಸೇನಾ ಶಾಲೆಯಿಂದ ಶೃಂಗಾರ್ ಪ್ಯಾಲೇಸ್ವರೆಗೆ ಭಗವಾನ್ ಬುದ್ಧ ಮತ್ತು ಅಂಬೇಡ್ಕರ್ ಅವರ ಅಸ್ಥಿಯನ್ನು ಶನಿವಾರ ಮೆರವಣಿಗೆಯಲ್ಲಿ ತಂದು ಚೈತ್ಯಾಲಯ ಮಾದರಿಯಲ್ಲಿ ಇರಿಸಿ ಅವರು ಮಾತನಾಡಿದರು.</p>.<p>ಅಂಬೇಡ್ಕರ್ ಪರಿನಿಬ್ಬಾಣದ ಸಮಯದಲ್ಲಿ ದಸರಾ ಆಚರಿಸಬೇಕು. ದಸರಾ ಮೆರವಣಿಗೆ ರೀತಿಯಲ್ಲೇ ವಿಧಾನಸೌಧದಿಂದ ಅರಮನೆ ಮೈದಾನದವರೆಗೆ ಆನೆ ಮೇಲಿನ ಅಂಬಾರಿಯಲ್ಲಿ ಬಾಬಾಸಾಹೇಬರ ಬಂಗಾರದ ಪುತ್ಥಳಿಯನ್ನು ಇರಿಸಿ ಮೆರವಣಿಗೆ ನಡೆಸಬೇಕು. ಪರಿಶಿಷ್ಟ ಜಾತಿ ಉಪಯೋಜನೆಯ ಅನುದಾನದಲ್ಲಿ ಈ ಹಬ್ಬಕ್ಕೆ ₹3 ಕೋಟಿ ಒದಗಿಸಬೇಕು ಎಂದು ಒತ್ತಾಯಿಸಿದರು. </p>.<p>ಬಂಗಾರದ ಪುತ್ಥಳಿ ನಿರ್ಮಿಸಲು ಪ್ರತಿಯೊಬ್ಬರೂ ಕನಿಷ್ಠ ಒಂದು ರೂಪಾಯಿ ಆದರೂ ನೀಡಬೇಕು. ಸರ್ಕಾರ ಪುತ್ಥಳಿಯನ್ನು ಅನಾವರಣಗೊಳಿಸಬೇಕು ಎಂದು ತಿಳಿಸಿದರು.</p>.<p>ಮುಂಬೈಯ ದಾದರ್ನಲ್ಲಿರುವ ಚೈತ್ಯಭೂಮಿಯ ಮಾದರಿಯಲ್ಲಿ, ಇಲ್ಲಿ ತಾತ್ಕಾಲಿಕ ಚೈತ್ಯಾಲಯ ನಿರ್ಮಿಸಲಾಗಿದೆ. ದಾದರ್ಗೆ ಹೋಗಲು ಸಾಧ್ಯವಾಗದವರು ನಿಬ್ಬಾಣದ ದಿನ ಇಲ್ಲೇ ಭೇಟಿ ನೀಡಲಿ ಎಂಬುದು ಇದರ ಉದ್ದೇಶವಾಗಿದೆ. ದಾದರ್ನಿಂದ ಅಂಬೇಡ್ಕರ್ ಅಸ್ಥಿ, ಶ್ರೀಲಂಕಾದಿಂದ ಬುದ್ಧನ ಅಸ್ಥಿ ತರಲಾಗಿದೆ ಎಂದರು.</p>.<p>ಭಿಕ್ಕುಣಿ ಮೈತ್ರಿ ಮಾತಾಜಿ ಮಾತನಾಡಿ, ‘ಅಂಬೇಡ್ಕರ್ ನೀಡಿದ ಉಡುಗೊರೆಯನ್ನು ನಾವು ಬರೆಯುವಂತಿಲ್ಲ. ಅವರು ನೀಡಿದ ಸಂವಿಧಾನ, ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಇದ್ದರೂ ಭಾರತದಿಂದ ಮರೆಯಾಗಿದ್ದ ಬೌದ್ಧ ಧರ್ಮವನ್ನು ಪುನರ್ಸ್ಥಾಪಿಸಿದ ಕೊಡುಗೆಗಳನ್ನು ಮರೆಯಬಾರದು’ ಎಂದು ಹೇಳಿದರು.</p>.<p>ಬೌದ್ಧ ಭಿಕ್ಕುಗಳಾದ ಭಂತೆ ಬೋಧಿದತ್ತ ಮಹಾಥೇರ, ಭಂತೆ ನಾಗಸೇನ, ಭಿಕ್ಕುಣಿ ಗೌತಮಿ ಮಾತಾಜಿ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.</p>.<p>ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆ, ಹಗಲು ರಾತ್ರಿ ಬುದ್ಧವಂದನೆ, ಭೀಮಗೀತೆ ಗಾಯನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>