‘ಈ ಕ್ಲಬ್ನ ಉದ್ದೇಶ ಸಾಮಾಜಿಕ ಸೌಹಾರ್ದ ಸ್ಥಾಪಿಸುವುದಾಗಿತ್ತೇ ವಿನಾ ವ್ಯಾಪಾರ ಅಥವಾ ಬೇರೆ ಯಾವುದೇ ವಾಣಿಜ್ಯ ಚಟುವಟಿಕೆಯ ಮೂಲಕ ಹಣ ಗಳಿಸುವುದಾಗಲಿ, ಲಾಭ ಮಾಡಿಕೊಳ್ಳುವುದಾಗಲಿ ಆಗಿರಲಿಲ್ಲ. ಆದ್ದರಿಂದ, ಆಸ್ತಿತೆರಿಗೆಯನ್ನು ಪಾವತಿಸಲು ಈ ಕ್ಲಬ್ ಬಾಧ್ಯತೆ ಹೊಂದಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನರಿಮನ್, ನವೀನ್ ಸಿನ್ಹಾ ಹಾಗೂ ಇಂದಿರಾ ಬ್ಯಾನರ್ಜಿ ಅವರ ಪೀಠ ಹೇಳಿದೆ.