‘ಸೋಂಪುರ ಬಸವಣ್ಣ ದೇವಾಲಯ ಚೋಳರ ಕಾಲಕ್ಕೆ ಸೇರಿದೆ. ಸ್ಥಳೀಯರ ಬೆಂಬಲದಿಂದ ಜೀರ್ಣೋದ್ಧಾರಗೊಳಿಸಿ ದಶಕಗಳಿಂದ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ನೆಲದ ಅಸ್ಮಿತೆ, ಗ್ರಾಮೀಣ ಸೊಗಡು ಹಾಗೂ ಕೃಷಿ ಚಟುವಟಿಕೆ ಉತ್ತೇಜಿಸಲು, ರಕ್ಷಿಸಿಕೊಳ್ಳಲು ಇಂತಹ ಆಚರಣೆಗಳೂ ಸಹಾಯಕವಾಗಿವೆ. ರಥವನ್ನು ಬಿ.ವೈ. ವಿಜಯೇಂದ್ರ ಕುಟುಂಬದವರು ದೇಣಿಗೆಯಾಗಿ ನೀಡಿದ್ದಾರೆ’ ಎಂದು ಕೆಆರ್ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.