<p><strong>ಬೆಂಗಳೂರು</strong>: ಫ್ರೆಂಚ್ ಇತಿಹಾಸವಿರುವ ‘ಬ್ಯಾಸ್ಟಿಲ್ ಡೇ’ಯನ್ನು ಮುಂದಿನ ವರ್ಷ ಬೆಂಗಳೂರು ನಗರದಲ್ಲಿ ಆಚರಿಸಲಾಗುವುದು ಎಂದು ಫ್ರಾನ್ಸ್ನ ರಾಯಭಾರಿ ಮಾರ್ಕ್ ಲ್ಯಾಮಿ ತಿಳಿಸಿದರು.</p>.<p>ನಗರದ ‘ಅಲಯನ್ಸ್ ಫ್ರಾನ್ಸೈಸ್’ನಲ್ಲಿ ಬುಧವಾರ ‘ವಚನಾಸ್ ಇನ್ ಫ್ರೆಂಚ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಾನು ಬೆಂಗಳೂರಿನಲ್ಲಿ ಬ್ಯಾಸ್ಟಿಲ್ ಡೇ ಆಚರಣೆಯ ಪರವಾಗಿದ್ದೇನೆ. ಈ ಕಾರ್ಯಕ್ರಮದ ರೂಪರೇಷೆ ತಯಾರಿಸಲಾಗುವುದು. ಕಾರ್ಯಕ್ರಮಕ್ಕಾಗಿ ವ್ಯವಸ್ಥಾಪನಾ ಸಿದ್ಧತೆ ಮತ್ತು ಭದ್ರತಾ ಸಿದ್ಧತೆಗಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.</p>.<p>‘ಭಾರತ ಮತ್ತು ಫ್ರಾನ್ಸ್ ಸಂಬಂಧಗಳು ಹಿಂದಿನಿಂದಲೂ ಅತ್ಯುತ್ತಮ ಸ್ಥಿತಿಯಲ್ಲಿದೆ. ಈ ಕಾರ್ಯಕ್ರಮ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಬಂಧವನ್ನು ಬಲಪಡಿಸುತ್ತದೆ’ ಎಂದು ತಿಳಿಸಿದರು.</p>.<p>ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ಬಸವಣ್ಣರ ವಚನಗಳಲ್ಲಿ ಇರುವ ಅಂತಃಶಕ್ತಿಯು ಅವುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿದೆ’ ಎಂದರು.</p>.<p>‘ಭಾರತ-ಫ್ರಾನ್ಸ್ ನಡುವಿನ ಎಲ್ಲ ಕ್ಷೇತ್ರಗಳಲ್ಲಿ ಸಂಬಂಧವನ್ನು ಬಲಪಡಿಸಲು ಅಲಯನ್ಸ್ ಫ್ರಾನ್ಸೆಸ್ ಸದಾ ಪ್ರಯತ್ನಿಸುತ್ತದೆ’ ಎಂದು ಅಲಯನ್ಸ್ ಫ್ರಾನ್ಸೆಸ್ ಅಧ್ಯಕ್ಷ ಚಿನ್ಮಯ ಚಿಗಟೇರಿ ಹೇಳಿದರು.</p>.<p>ಗಾಯಕಿ ಎಂ.ಡಿ. ಪಲ್ಲವಿ ವಚನಗಳನ್ನು ಹಾಡಿದರು. ರಜನಿ ಶಿವರಾಮ ಅವರು ವಚನಗಳನ್ನು ಕನ್ನಡ ಮತ್ತು ಫ್ರೆಂಚ್ ಎರಡೂ ಭಾಷೆಗಳಲ್ಲಿ ಹಾಡಿದರು. ಅಲಯನ್ಸ್ ಫ್ರಾನ್ಸೆಸ್ ನಿರ್ದೇಶಕ ಜೀನ್ ಮಾರ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಫ್ರೆಂಚ್ ಇತಿಹಾಸವಿರುವ ‘ಬ್ಯಾಸ್ಟಿಲ್ ಡೇ’ಯನ್ನು ಮುಂದಿನ ವರ್ಷ ಬೆಂಗಳೂರು ನಗರದಲ್ಲಿ ಆಚರಿಸಲಾಗುವುದು ಎಂದು ಫ್ರಾನ್ಸ್ನ ರಾಯಭಾರಿ ಮಾರ್ಕ್ ಲ್ಯಾಮಿ ತಿಳಿಸಿದರು.</p>.<p>ನಗರದ ‘ಅಲಯನ್ಸ್ ಫ್ರಾನ್ಸೈಸ್’ನಲ್ಲಿ ಬುಧವಾರ ‘ವಚನಾಸ್ ಇನ್ ಫ್ರೆಂಚ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಾನು ಬೆಂಗಳೂರಿನಲ್ಲಿ ಬ್ಯಾಸ್ಟಿಲ್ ಡೇ ಆಚರಣೆಯ ಪರವಾಗಿದ್ದೇನೆ. ಈ ಕಾರ್ಯಕ್ರಮದ ರೂಪರೇಷೆ ತಯಾರಿಸಲಾಗುವುದು. ಕಾರ್ಯಕ್ರಮಕ್ಕಾಗಿ ವ್ಯವಸ್ಥಾಪನಾ ಸಿದ್ಧತೆ ಮತ್ತು ಭದ್ರತಾ ಸಿದ್ಧತೆಗಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.</p>.<p>‘ಭಾರತ ಮತ್ತು ಫ್ರಾನ್ಸ್ ಸಂಬಂಧಗಳು ಹಿಂದಿನಿಂದಲೂ ಅತ್ಯುತ್ತಮ ಸ್ಥಿತಿಯಲ್ಲಿದೆ. ಈ ಕಾರ್ಯಕ್ರಮ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಬಂಧವನ್ನು ಬಲಪಡಿಸುತ್ತದೆ’ ಎಂದು ತಿಳಿಸಿದರು.</p>.<p>ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ಬಸವಣ್ಣರ ವಚನಗಳಲ್ಲಿ ಇರುವ ಅಂತಃಶಕ್ತಿಯು ಅವುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿದೆ’ ಎಂದರು.</p>.<p>‘ಭಾರತ-ಫ್ರಾನ್ಸ್ ನಡುವಿನ ಎಲ್ಲ ಕ್ಷೇತ್ರಗಳಲ್ಲಿ ಸಂಬಂಧವನ್ನು ಬಲಪಡಿಸಲು ಅಲಯನ್ಸ್ ಫ್ರಾನ್ಸೆಸ್ ಸದಾ ಪ್ರಯತ್ನಿಸುತ್ತದೆ’ ಎಂದು ಅಲಯನ್ಸ್ ಫ್ರಾನ್ಸೆಸ್ ಅಧ್ಯಕ್ಷ ಚಿನ್ಮಯ ಚಿಗಟೇರಿ ಹೇಳಿದರು.</p>.<p>ಗಾಯಕಿ ಎಂ.ಡಿ. ಪಲ್ಲವಿ ವಚನಗಳನ್ನು ಹಾಡಿದರು. ರಜನಿ ಶಿವರಾಮ ಅವರು ವಚನಗಳನ್ನು ಕನ್ನಡ ಮತ್ತು ಫ್ರೆಂಚ್ ಎರಡೂ ಭಾಷೆಗಳಲ್ಲಿ ಹಾಡಿದರು. ಅಲಯನ್ಸ್ ಫ್ರಾನ್ಸೆಸ್ ನಿರ್ದೇಶಕ ಜೀನ್ ಮಾರ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>