<p><strong>ಬೆಂಗಳೂರು:</strong> ಬೆಂಗಳೂರು ಉಪನಗರ ಕಾರಿಡಾರ್–2 ನಿರ್ಮಾಣಕ್ಕಾಗಿ ಭೂಸ್ವಾಧೀನದ ವೇಳೆ ರೈಲ್ವೆ ಮಾರ್ಗದ ಪಕ್ಕದಲ್ಲಿದ್ದ ₹40 ಕೋಟಿ ಮೌಲ್ಯದ ಭೂಮಿ ಒತ್ತುವರಿಯಾಗಿರುವುದು ಗೊತ್ತಾಗಿದ್ದು, ಸುಮಾರು 20 ಗುಂಟೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.</p>.<p>ಬೆಂಗಳೂರು ಉತ್ತರ ತಾಲ್ಲೂಕು ಮ್ಯಾಕಲ ಚನ್ನೇನಹಳ್ಳಿ ಗ್ರಾಮ ಹಾಗೂ ಯಲಹಂಕ ಪೀಣ್ಯ ಪ್ಲಾಂಟೇಶನ್ಗೆ ಸೇರಿಕೊಂಡ ಗಡಿ ಮಧ್ಯದಲ್ಲಿ ರೈಲ್ವೆ ಮಾರ್ಗವಿದೆ. ಇದಕ್ಕೆ ಹೊಂದಿಕೊಂಡ 500 ಮೀಟರ್ ಖರಾಬು ಜಮೀನು ಒತ್ತುವರಿಯಾಗಿರುವುದು ಭೂಸ್ವಾಧೀನದ ವೇಳೆ ಪತ್ತೆಯಾಯಿತು.</p>.<p>ಈ ಭೂಮಿಯನ್ನು ಬಾಗಮಾನೆ ಡೆವಲಪರ್ಸ್ನವರು ಒತ್ತುವರಿ ಮಾಡಿರುವುದು ಪರಿಶೀಲನೆ ವೇಳೆ ತಿಳಿಯಿತು. ಇದು ರೈಲ್ವೆ ರಸ್ತೆಗೆ ಸೇರಿದ ಜಮೀನಾಗಿದೆ ಎಂದು ಬೆಂಗಳೂರು ಉತ್ತರ ಹಾಗೂ ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢಪಡಿಸಿದರು.</p>.<p>ಬಾಗಮಾನೆ ಡೆವಲಪರ್ಸ್ ಪ್ರತಿನಿಧಿಗಳಿಗೆ ಒತ್ತುವರಿ ಬಗ್ಗೆ ತಿಳಿವಳಿಕೆ ನೀಡಿ, ಭೂಮಿಯನ್ನು ವಶಪಡಿಸಿಕೊಂಡು ಉಪನಗರ ಕಾರಿಡಾರ್ ಯೋಜನೆ ಕೆ ರೈಡ್ಗೆ ಹಸ್ತಾಂತರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಉಪನಗರ ಕಾರಿಡಾರ್–2 ನಿರ್ಮಾಣಕ್ಕಾಗಿ ಭೂಸ್ವಾಧೀನದ ವೇಳೆ ರೈಲ್ವೆ ಮಾರ್ಗದ ಪಕ್ಕದಲ್ಲಿದ್ದ ₹40 ಕೋಟಿ ಮೌಲ್ಯದ ಭೂಮಿ ಒತ್ತುವರಿಯಾಗಿರುವುದು ಗೊತ್ತಾಗಿದ್ದು, ಸುಮಾರು 20 ಗುಂಟೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.</p>.<p>ಬೆಂಗಳೂರು ಉತ್ತರ ತಾಲ್ಲೂಕು ಮ್ಯಾಕಲ ಚನ್ನೇನಹಳ್ಳಿ ಗ್ರಾಮ ಹಾಗೂ ಯಲಹಂಕ ಪೀಣ್ಯ ಪ್ಲಾಂಟೇಶನ್ಗೆ ಸೇರಿಕೊಂಡ ಗಡಿ ಮಧ್ಯದಲ್ಲಿ ರೈಲ್ವೆ ಮಾರ್ಗವಿದೆ. ಇದಕ್ಕೆ ಹೊಂದಿಕೊಂಡ 500 ಮೀಟರ್ ಖರಾಬು ಜಮೀನು ಒತ್ತುವರಿಯಾಗಿರುವುದು ಭೂಸ್ವಾಧೀನದ ವೇಳೆ ಪತ್ತೆಯಾಯಿತು.</p>.<p>ಈ ಭೂಮಿಯನ್ನು ಬಾಗಮಾನೆ ಡೆವಲಪರ್ಸ್ನವರು ಒತ್ತುವರಿ ಮಾಡಿರುವುದು ಪರಿಶೀಲನೆ ವೇಳೆ ತಿಳಿಯಿತು. ಇದು ರೈಲ್ವೆ ರಸ್ತೆಗೆ ಸೇರಿದ ಜಮೀನಾಗಿದೆ ಎಂದು ಬೆಂಗಳೂರು ಉತ್ತರ ಹಾಗೂ ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢಪಡಿಸಿದರು.</p>.<p>ಬಾಗಮಾನೆ ಡೆವಲಪರ್ಸ್ ಪ್ರತಿನಿಧಿಗಳಿಗೆ ಒತ್ತುವರಿ ಬಗ್ಗೆ ತಿಳಿವಳಿಕೆ ನೀಡಿ, ಭೂಮಿಯನ್ನು ವಶಪಡಿಸಿಕೊಂಡು ಉಪನಗರ ಕಾರಿಡಾರ್ ಯೋಜನೆ ಕೆ ರೈಡ್ಗೆ ಹಸ್ತಾಂತರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>