‘ನಗರದ ಬನಶಂಕರಿಯಲ್ಲಿ ಬಿಡಿಎ ಅಭಿವೃದ್ಧಿಪಡಿಸಿದ್ದ ನಿವೇಶನವನ್ನು ಈ ಹಿಂದೆ ಖರೀದಿಸಿದ್ದೆ. ವರ್ಗಾವಣೆ ಆಗಿದ್ದರಿಂದ ಕಳೆದ ಹತ್ತು ವರ್ಷಗಳಿಂದ ಮೈಸೂರಿನಲ್ಲಿ ನೆಲಸಿದ್ದೇನೆ. ನಿವೇಶನದ ಸ್ಥಿತಿ ನೋಡಿಕೊಂಡು ಬರಲು ಇತ್ತೀಚೆಗೆ ನಗರಕ್ಕೆ ಬಂದಿದ್ದೆ. ಆದರೆ, ಆ ನಿವೇಶನಕ್ಕೆ ಯಾರೋ ಬೇಲಿ ಹಾಕಿರುವುದು ಕಂಡುಬಂತು. ಠಾಣೆಗೆ
ದೂರು ನೀಡಿದ್ದೇನೆ’
ಎಂದು ವ್ಯಕ್ತಿಯೊಬ್ಬರು ತಿಳಿಸಿದರು.
ನಿವೇಶನ ಖರೀದಿಸುವವರು ಮೂಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಹಣ ನೀಡುವುದಕ್ಕೂ ಮೊದಲು ಕಾನೂನು ತಜ್ಞರ ಸಲಹೆ ಪಡೆಯಬೇಕು.
– ಸೀಮಂತ್ಕುಮಾರ್, ನಗರ ಪೊಲೀಸ್ ಕಮಿಷನರ್
ಜನರಿಗೆ ಭಯ
‘ಸೈಬರ್ ವಂಚನೆ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ವಾಟ್ಸ್ಆ್ಯಪ್ಗೆ ಬಂದ ಯಾವುದಾದರೂ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆಗಳಿಂದ ಹಣ ಖಾಲಿಯಾಗುವ ಭಯ ಜನರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಜನರು ನಿವೇಶನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ರೀತಿಯ ಹುಡುಕಾಟ ನಡೆಸಿದವರ ಮಾಹಿತಿ ಸಂಗ್ರಹಿಸುವ ಆರೋಪಿಗಳು, ಯಾರದ್ದೋ ನಿವೇಶನ ತೋರಿಸಿ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳು ನಗರದಲ್ಲಿ ಪ್ರತಿನಿತ್ಯ ವರದಿ ಆಗುತ್ತಿವೆ’ ಎಂದು ಮೂಲಗಳು ಹೇಳಿವೆ.