<p><strong>ಬೆಂಗಳೂರು</strong>: ಸಾಲ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಡಿ.ಆರ್.ನಯನಾ ಬಂಧಿತೆ.</p>.<p>ಸಾರ್ವಜನಿಕರಿಗೆ ₹12.20 ಲಕ್ಷ ವಂಚಿಸಿದ್ದ ಆರೋಪದ ಅಡಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಶೇ 1ರ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಆರೋಪಿ ನಂಬಿಸುತ್ತಿದ್ದರು. ₹ 10 ಲಕ್ಷ ಸಾಲದ ಹಣಕ್ಕೆ ಮುಂಗಡವಾಗಿ ಮೂರು ತಿಂಗಳ ಇಎಂಐ ಅನ್ನು ₹30 ಸಾವಿರದಂತೆ 15 ಮಂದಿಯಿಂದ ಪಡೆದುಕೊಂಡಿದ್ದರು. ಅಲ್ಲದೇ ಸಾಲವನ್ನೂ ನೀಡಿರಲಿಲ್ಲ. ಸಾರ್ವಜನಿಕರಿಂದ ಮುಂಗಡವಾಗಿ ಕಡಿತ ಮಾಡಿಕೊಂಡಿದ್ದ ₹ 12.22 ಲಕ್ಷವನ್ನೂ ಮರುಪಾವತಿ ಮಾಡದೇ ವಂಚಿಸಿದ್ದರು. ಆರೋಪಿ ವಿರುದ್ಧ ಬಸವೇಶ್ವರನಗರ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದರು.</p>.<p>ಆರೋಪಿಯಿಂದ ವಂಚನೆಗೆ ಒಳಗಾದವರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬವರು. ಈ ರೀತಿ ಆಮಿಷವೊಡ್ಡಿ ವಂಚನೆ ನಡೆಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಾಲ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಡಿ.ಆರ್.ನಯನಾ ಬಂಧಿತೆ.</p>.<p>ಸಾರ್ವಜನಿಕರಿಗೆ ₹12.20 ಲಕ್ಷ ವಂಚಿಸಿದ್ದ ಆರೋಪದ ಅಡಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಶೇ 1ರ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಆರೋಪಿ ನಂಬಿಸುತ್ತಿದ್ದರು. ₹ 10 ಲಕ್ಷ ಸಾಲದ ಹಣಕ್ಕೆ ಮುಂಗಡವಾಗಿ ಮೂರು ತಿಂಗಳ ಇಎಂಐ ಅನ್ನು ₹30 ಸಾವಿರದಂತೆ 15 ಮಂದಿಯಿಂದ ಪಡೆದುಕೊಂಡಿದ್ದರು. ಅಲ್ಲದೇ ಸಾಲವನ್ನೂ ನೀಡಿರಲಿಲ್ಲ. ಸಾರ್ವಜನಿಕರಿಂದ ಮುಂಗಡವಾಗಿ ಕಡಿತ ಮಾಡಿಕೊಂಡಿದ್ದ ₹ 12.22 ಲಕ್ಷವನ್ನೂ ಮರುಪಾವತಿ ಮಾಡದೇ ವಂಚಿಸಿದ್ದರು. ಆರೋಪಿ ವಿರುದ್ಧ ಬಸವೇಶ್ವರನಗರ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದರು.</p>.<p>ಆರೋಪಿಯಿಂದ ವಂಚನೆಗೆ ಒಳಗಾದವರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬವರು. ಈ ರೀತಿ ಆಮಿಷವೊಡ್ಡಿ ವಂಚನೆ ನಡೆಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>