ವಿಜಯನಗರ ಠಾಣೆ ಬಳಿ ದಂಪತಿಯನ್ನು ಮಾತನಾಡಿಸಿದ್ದ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಮನು, ಅವರ ಕಥೆ ಕೇಳಿ ಕಣ್ಣೀರಿಟಿದ್ದರು. ನಾಲ್ಕು ತಿಂಗಳಿಗೆ ಆಗುವಷ್ಟು ದಿನಸಿ ಖರೀದಿಸಿ ನೀಡಿದರು. ನಂತರ ಆಟೊದಲ್ಲಿ ದಂಪತಿಯನ್ನು ಮನೆಗೆ ಕಳುಹಿಸಿದ್ದರು.50 ಕೆ.ಜಿ ಅಕ್ಕಿ, 10 ಕೆ.ಜಿ ಬೇಳೆ, 5 ಕೆ.ಜಿ ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, 12 ಮೈ ಸೋಪು, 12 ಬಟ್ಟೆ ಸೋಪು, 10 ಕೆ.ಜಿ. ಸಕ್ಕರೆ, 2 ಕೆ.ಜಿ ಟೀ ಪುಡಿ, 1 ಕೆ.ಜಿ ಹಾಲಿನ ಪೌಡರ್, ಬಿಸ್ಕೆಟ್, ಮಗುವಿಗೆ ಪೌಡರ್ ಹಾಗೂ ಮಕ್ಕಳಿಗೆ ಬೇಕಾದ ಔಷಧಿಗಳು ದಿನಸಿ ಜೊತೆಯಲ್ಲಿದ್ದವು.