<p><strong>ಬೆಂಗಳೂರು</strong>: ನಗರದಲ್ಲಿ ಭಾನುವಾರ ದಿನವಿಡೀ ಬಿಟ್ಟು ಬಿಟ್ಟು ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳಲ್ಲೇ ನೀರು ನಿಂತಿತ್ತು.</p>.<p>ವಡ್ಡರಪಾಳ್ಯ– ಹೆಣ್ಣೂರು ರಸ್ತೆ, ವಡ್ಡರಪಾಳ್ಯ–ಗೆದ್ದಲಹಳ್ಳಿ, ಕಬ್ಬನ್ ರಸ್ತೆ, ಜಯಮಹಲ್ ರಸ್ತೆ, ಖೋಡೆ ವೃತ್ತ, ವಿಂಡ್ಸರ್ ಮ್ಯಾನರ್ ಬಳಿ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಮಳೆ ನೀರು ಹರಿಯಲು ಅಡ್ಡಿಯಾಯಿತು. </p>.<p>ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಕಾರ್ಯಕ್ರಮಗಳಿಗೆ ಬಂದೋಬಸ್ತ್ ಮಾಡಲು ಆಗಮಿಸಿದ್ದ ಪೊಲೀಸರಿಗೂ ಮಳೆ ಅಡ್ಡಿಯಾಯಿತು.</p>.<h2>ಮಳೆ ವಿವರ: </h2><p>ವಿಶ್ವನಾಥ ನಾಗೇನಹಳ್ಳಿ 4.2 ಸೆಂ.ಮೀ. , ಹಂಪಿನಗರ 3.1 ಸೆಂ.ಮೀ., ಹೊರಮಾವು 2.8 ಸೆಂ.ಮೀ., ಜಕ್ಕೂರು 2.7 ಸೆಂ.ಮೀ., ಕೋರಮಂಗಲ 2.5 ಸೆಂ.ಮೀ., ಸಿಂಗಸಂದ್ರ 2.4 ಸೆಂ.ಮೀ., ಮನೋರಾಯನ ಪಾಳ್ಯ 2.4 ಸೆಂ.ಮೀ., ರಾಮಮೂರ್ತಿ ನಗರ 2.2 ಸೆಂ.ಮೀ., ಪುಟ್ಟೇನಹಳ್ಳಿ 2.2 ಸೆಂ.ಮೀ., ಬಾಣಸವಾಡಿ 2 ಸೆಂ.ಮೀ. ಮಳೆಯಾಗಿದೆ. </p>.<p>ಹೆಮ್ಮಿಗೆಪುರ, ಶೆಟ್ಟಿಹಳ್ಳಿ, ಚೌಡೇಶ್ವರಿ, ಬೊಮ್ಮನಹಳ್ಳಿ, ಮಾರುತಿ ಮಂದಿರ, ಬಾಗಲಗುಂಟೆ, ಎಚ್.ಎಸ್.ಆರ್. ಲೇಔಟ್, ಕಾಡುಗೋಡಿ, ಬಸವನಪುರ, ಗರುಡಾಚಾರ್ ಪಾಳ್ಯ, ವಿದ್ಯಾಪೀಠ, ಯಶವಂತಪುರ, ಎಂ.ಜಿ. ರಸ್ತೆ, ಮೆಜೆಸ್ಟಿಕ್, ಯಲಹಂಕ ಸೇರಿದಂತೆ ನಗರದ ಎಲ್ಲ ಪ್ರದೇಶಗಳಲ್ಲಿ ಬಿರುಸಿನಿಂದ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದಲ್ಲಿ ಭಾನುವಾರ ದಿನವಿಡೀ ಬಿಟ್ಟು ಬಿಟ್ಟು ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳಲ್ಲೇ ನೀರು ನಿಂತಿತ್ತು.</p>.<p>ವಡ್ಡರಪಾಳ್ಯ– ಹೆಣ್ಣೂರು ರಸ್ತೆ, ವಡ್ಡರಪಾಳ್ಯ–ಗೆದ್ದಲಹಳ್ಳಿ, ಕಬ್ಬನ್ ರಸ್ತೆ, ಜಯಮಹಲ್ ರಸ್ತೆ, ಖೋಡೆ ವೃತ್ತ, ವಿಂಡ್ಸರ್ ಮ್ಯಾನರ್ ಬಳಿ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಮಳೆ ನೀರು ಹರಿಯಲು ಅಡ್ಡಿಯಾಯಿತು. </p>.<p>ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಕಾರ್ಯಕ್ರಮಗಳಿಗೆ ಬಂದೋಬಸ್ತ್ ಮಾಡಲು ಆಗಮಿಸಿದ್ದ ಪೊಲೀಸರಿಗೂ ಮಳೆ ಅಡ್ಡಿಯಾಯಿತು.</p>.<h2>ಮಳೆ ವಿವರ: </h2><p>ವಿಶ್ವನಾಥ ನಾಗೇನಹಳ್ಳಿ 4.2 ಸೆಂ.ಮೀ. , ಹಂಪಿನಗರ 3.1 ಸೆಂ.ಮೀ., ಹೊರಮಾವು 2.8 ಸೆಂ.ಮೀ., ಜಕ್ಕೂರು 2.7 ಸೆಂ.ಮೀ., ಕೋರಮಂಗಲ 2.5 ಸೆಂ.ಮೀ., ಸಿಂಗಸಂದ್ರ 2.4 ಸೆಂ.ಮೀ., ಮನೋರಾಯನ ಪಾಳ್ಯ 2.4 ಸೆಂ.ಮೀ., ರಾಮಮೂರ್ತಿ ನಗರ 2.2 ಸೆಂ.ಮೀ., ಪುಟ್ಟೇನಹಳ್ಳಿ 2.2 ಸೆಂ.ಮೀ., ಬಾಣಸವಾಡಿ 2 ಸೆಂ.ಮೀ. ಮಳೆಯಾಗಿದೆ. </p>.<p>ಹೆಮ್ಮಿಗೆಪುರ, ಶೆಟ್ಟಿಹಳ್ಳಿ, ಚೌಡೇಶ್ವರಿ, ಬೊಮ್ಮನಹಳ್ಳಿ, ಮಾರುತಿ ಮಂದಿರ, ಬಾಗಲಗುಂಟೆ, ಎಚ್.ಎಸ್.ಆರ್. ಲೇಔಟ್, ಕಾಡುಗೋಡಿ, ಬಸವನಪುರ, ಗರುಡಾಚಾರ್ ಪಾಳ್ಯ, ವಿದ್ಯಾಪೀಠ, ಯಶವಂತಪುರ, ಎಂ.ಜಿ. ರಸ್ತೆ, ಮೆಜೆಸ್ಟಿಕ್, ಯಲಹಂಕ ಸೇರಿದಂತೆ ನಗರದ ಎಲ್ಲ ಪ್ರದೇಶಗಳಲ್ಲಿ ಬಿರುಸಿನಿಂದ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>