<p><strong>ಬೆಂಗಳೂರು:</strong> ಬಂಡೇಪಾಳ್ಯ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ.</p><p>ರಿಷಬ್ ಚಕ್ರವರ್ತಿ, ಅಜೀವುಲ್ಲಾ ಹಾಗೂ ನಜೀವುಲ್ಲಾ ಬಂಧಿತರು. ಆರೋಪಿಗಳಿಂದ ₹20 ಲಕ್ಷ ಮೌಲ್ಯದ ಒಟ್ಟು 18 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.</p><p>ಪಶ್ಚಿಮ ಬಂಗಾಳದ ರಿಷಬ್ ಚಕ್ರವರ್ತಿ ಬಿ.ಟೆಕ್ ಪದವಿ ಪಡೆದಿದ್ದರು. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗಿದ್ದರು. ಜೈಲಿನಿಂದ ಬಿಡುಗಡೆಯಾದ ಮೇಲೂ ಮತ್ತೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.</p><p>ಆರೋಪಿಗಳ ಬಂಧನದಿಂದ ಬಂಡೇಪಾಳ್ಯ, ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಗಿರಿನಗರ, ವಿವೇಕ್ ನಗರ, ಬಾಗಲಗುಂಟೆ, ರಾಜಗೋಪಾಲನಗರ, ಇಂದಿರಾನಗರ, ಕೆ.ಎಸ್.ಲೇಔಟ್, ಬಾಗಲಗುಂಟೆ ಹಾಗೂ ಹೆಣ್ಣೂರು ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.</p>
<p><strong>ಬೆಂಗಳೂರು:</strong> ಬಂಡೇಪಾಳ್ಯ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ.</p><p>ರಿಷಬ್ ಚಕ್ರವರ್ತಿ, ಅಜೀವುಲ್ಲಾ ಹಾಗೂ ನಜೀವುಲ್ಲಾ ಬಂಧಿತರು. ಆರೋಪಿಗಳಿಂದ ₹20 ಲಕ್ಷ ಮೌಲ್ಯದ ಒಟ್ಟು 18 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.</p><p>ಪಶ್ಚಿಮ ಬಂಗಾಳದ ರಿಷಬ್ ಚಕ್ರವರ್ತಿ ಬಿ.ಟೆಕ್ ಪದವಿ ಪಡೆದಿದ್ದರು. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗಿದ್ದರು. ಜೈಲಿನಿಂದ ಬಿಡುಗಡೆಯಾದ ಮೇಲೂ ಮತ್ತೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.</p><p>ಆರೋಪಿಗಳ ಬಂಧನದಿಂದ ಬಂಡೇಪಾಳ್ಯ, ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಗಿರಿನಗರ, ವಿವೇಕ್ ನಗರ, ಬಾಗಲಗುಂಟೆ, ರಾಜಗೋಪಾಲನಗರ, ಇಂದಿರಾನಗರ, ಕೆ.ಎಸ್.ಲೇಔಟ್, ಬಾಗಲಗುಂಟೆ ಹಾಗೂ ಹೆಣ್ಣೂರು ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.</p>