ಕುಸಿದ ಸ್ಲ್ಯಾಬ್: ಮುಖ್ಯರಸ್ತೆಯ ಇಕ್ಕೆಲ ಗಳ ಒಳಚರಂಡಿ ಸ್ಲ್ಯಾಬ್ಗಳು ಕುಸಿದಿರುವುದನ್ನು ನೋಡಿದ ಶಾಸಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ನಿಮ್ಮ ಮಕ್ಕಳು ರಸ್ತೆಯಲ್ಲಿ ಓಡಾಡುವಾಗ, ಚರಂಡಿಯಲ್ಲಿ ಬಿದ್ದರೆ ಏನು ಮಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಅಡ್ಡರಸ್ತೆಯೊಂದರಲ್ಲಿ ಚರಂಡಿ ನಿರ್ಮಾಣಕ್ಕೂ ಮುನ್ನವೇ ರಸ್ತೆಗೆ ಕಾಂಕ್ರಿಟ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ‘ಕಾಮಗಾರಿಯ ಬಿಲ್ ತಡೆಹಿಡಿಯಿರಿ’ ಎಂದು ವಲಯದ ಜಂಟಿ ಆಯುಕ್ತ ಎಂ.ರಾಮಕೃಷ್ಣ ಅವರಿಗೆ ಸೂಚಿಸಿದರು.