<p><strong>ಬೆಂಗಳೂರು</strong>: ‘ನಮ್ಮ ವಿಚಾರಧಾರೆ, ತಾತ್ವಿಕತೆ ಹಾಗೂ ಸಿದ್ಧಾಂತಗಳನ್ನು ಮಕ್ಕಳ ಹೆಸರಿನ ಮೂಲಕ ಹೇರಲು ಪ್ರಯತ್ನಿಸುತ್ತಿದ್ದೇವೆಯೋ ಅನಿಸುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. </p>.<p>ಜೀರುಂಡೆ ಪುಸ್ತಕ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಸ್.ಗಂಗಾಧರಯ್ಯ ಅವರ ‘ಗಂಗಾಪಾಣಿ’ ಕಾದಂಬರಿ ಬಿಡುಗಡೆ ಮಾಡಿ, ಮಾತನಾಡಿದರು. </p>.<p>‘ತಾವು ನಂಬಿದ, ಪ್ರಭಾವಿತವಾದ ವಿಚಾರಧಾರೆ ಆಧರಿಸಿ ಗಾಂಧಿ ಸೇರಿ ವಿವಿಧ ಹೆಸರನ್ನು ಇಟ್ಟ ಉದಾಹರಣೆಗಳು ಸಿಗುತ್ತವೆ. ಪರಿಚಯಸ್ಥರೊಬ್ಬರು ಮೊದಲಿನ ಮಗನಿಗೆ ‘ರಾಷ್ಟ್ರಪತಿ’ಯೆಂದು, ಎರಡನೆ ಮಗನಿಗೆ ‘ಉಪ ರಾಷ್ಟ್ರಪತಿ’ಯೆಂದು ಹೆಸರಿಟ್ಟರು. ತಾವೇನು ಕಡಿಮೆಯೆಂದು ಈ ರೀತಿ ಹೆಸರಿಟ್ಟಿದ್ದರು. ತಮಿಳುನಾಡಿನಲ್ಲಿ ತೇಲಂ ಮೋಹನ್ ಎನ್ನುವವರು ತಮ್ಮ ಮೂವರು ಮಕ್ಕಳಿಗೆ ‘ಕಮ್ಯೂನಿಸಂ’, ‘ಲೆನಿನಿಸಂ’, ‘ಸೋಶಿಯಲಿಸಂ’ ಎಂಬ ಹೆಸರಿಟ್ಟಿದ್ದರು. ಈ ರೀತಿ ಪ್ರಯೋಗಗಳು ನಡೆಯುತ್ತಿರುತ್ತವೆ’ ಎಂದು ಹೇಳಿದರು. </p>.<p>ಪುಸ್ತಕದ ಬಗ್ಗೆ ಮಾತನಾಡಿದ ಪ್ರಾಧ್ಯಾಪಕಿ ಬಿ.ಯು.ಸುಮಾ, ‘ಕಾದಂಬರಿ ಐದು ತಲೆಮಾರಿನ ಕಥೆ ಹೇಳುತ್ತದೆ. ಕಾಲ ಬದಲಾದಂತೆ ಬದುಕು ಪಡೆದುಕೊಳ್ಳುವ ತಿರುವುಗಳನ್ನು ತಿಳಿಸುತ್ತದೆ’ ಎಂದು ತಿಳಿಸಿದರು. </p>.<p>ಸುಧಾ ವಾರಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ, ಲೇಖಕ ಎಸ್.ಗಂಗಾಧರಯ್ಯ, ಧನಂಜಯ್ ಎನ್. ಅವರು ಉಪಸ್ಥಿತರಿದ್ದರು. </p>.<p><strong>ಪುಸ್ತಕ ಪರಿಚಯ </strong></p><p>ಪುಸ್ತಕ: ‘ಗಂಗಾಪಾಣಿ’</p><p>ಲೇಖಕ: ಎಸ್. ಗಂಗಾಧರಯ್ಯ </p><p>ಪುಟಗಳು: 248 </p><p>ಬೆಲೆ: ₹280 </p><p>ಪ್ರಕಾಶನ: ಜೀರುಂಡೆ ಪ್ರಕಾಶನ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಮ್ಮ ವಿಚಾರಧಾರೆ, ತಾತ್ವಿಕತೆ ಹಾಗೂ ಸಿದ್ಧಾಂತಗಳನ್ನು ಮಕ್ಕಳ ಹೆಸರಿನ ಮೂಲಕ ಹೇರಲು ಪ್ರಯತ್ನಿಸುತ್ತಿದ್ದೇವೆಯೋ ಅನಿಸುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. </p>.<p>ಜೀರುಂಡೆ ಪುಸ್ತಕ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಸ್.ಗಂಗಾಧರಯ್ಯ ಅವರ ‘ಗಂಗಾಪಾಣಿ’ ಕಾದಂಬರಿ ಬಿಡುಗಡೆ ಮಾಡಿ, ಮಾತನಾಡಿದರು. </p>.<p>‘ತಾವು ನಂಬಿದ, ಪ್ರಭಾವಿತವಾದ ವಿಚಾರಧಾರೆ ಆಧರಿಸಿ ಗಾಂಧಿ ಸೇರಿ ವಿವಿಧ ಹೆಸರನ್ನು ಇಟ್ಟ ಉದಾಹರಣೆಗಳು ಸಿಗುತ್ತವೆ. ಪರಿಚಯಸ್ಥರೊಬ್ಬರು ಮೊದಲಿನ ಮಗನಿಗೆ ‘ರಾಷ್ಟ್ರಪತಿ’ಯೆಂದು, ಎರಡನೆ ಮಗನಿಗೆ ‘ಉಪ ರಾಷ್ಟ್ರಪತಿ’ಯೆಂದು ಹೆಸರಿಟ್ಟರು. ತಾವೇನು ಕಡಿಮೆಯೆಂದು ಈ ರೀತಿ ಹೆಸರಿಟ್ಟಿದ್ದರು. ತಮಿಳುನಾಡಿನಲ್ಲಿ ತೇಲಂ ಮೋಹನ್ ಎನ್ನುವವರು ತಮ್ಮ ಮೂವರು ಮಕ್ಕಳಿಗೆ ‘ಕಮ್ಯೂನಿಸಂ’, ‘ಲೆನಿನಿಸಂ’, ‘ಸೋಶಿಯಲಿಸಂ’ ಎಂಬ ಹೆಸರಿಟ್ಟಿದ್ದರು. ಈ ರೀತಿ ಪ್ರಯೋಗಗಳು ನಡೆಯುತ್ತಿರುತ್ತವೆ’ ಎಂದು ಹೇಳಿದರು. </p>.<p>ಪುಸ್ತಕದ ಬಗ್ಗೆ ಮಾತನಾಡಿದ ಪ್ರಾಧ್ಯಾಪಕಿ ಬಿ.ಯು.ಸುಮಾ, ‘ಕಾದಂಬರಿ ಐದು ತಲೆಮಾರಿನ ಕಥೆ ಹೇಳುತ್ತದೆ. ಕಾಲ ಬದಲಾದಂತೆ ಬದುಕು ಪಡೆದುಕೊಳ್ಳುವ ತಿರುವುಗಳನ್ನು ತಿಳಿಸುತ್ತದೆ’ ಎಂದು ತಿಳಿಸಿದರು. </p>.<p>ಸುಧಾ ವಾರಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ, ಲೇಖಕ ಎಸ್.ಗಂಗಾಧರಯ್ಯ, ಧನಂಜಯ್ ಎನ್. ಅವರು ಉಪಸ್ಥಿತರಿದ್ದರು. </p>.<p><strong>ಪುಸ್ತಕ ಪರಿಚಯ </strong></p><p>ಪುಸ್ತಕ: ‘ಗಂಗಾಪಾಣಿ’</p><p>ಲೇಖಕ: ಎಸ್. ಗಂಗಾಧರಯ್ಯ </p><p>ಪುಟಗಳು: 248 </p><p>ಬೆಲೆ: ₹280 </p><p>ಪ್ರಕಾಶನ: ಜೀರುಂಡೆ ಪ್ರಕಾಶನ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>