ಐಐಎಸ್ಸಿ, ಬೆಂಗಳೂರು ವಾಟರ್ ಸಲ್ಯೂಷನ್ ಲ್ಯಾಬ್ (ಡಬ್ಲ್ಯುಎಸ್ಎಲ್ಬಿ), ಹವಾಮಾನ ಬದಲಾವಣೆಗಾಗಿನ ದಿವೇಚಾ ಕೇಂದ್ರದೊಂದಿಗಿನ ಈ ಒಪ್ಪಂದಕ್ಕೆ ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಸೆ.25ರಂದು ಸಹಿ ಹಾಕಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಜಲಮಂಡಳಿಯು ಈ ಕೇಂದ್ರದ ವಿಜ್ಞಾನಿಗಳಿಗೆ ನೀಡಿದರೆ, ಅದಕ್ಕೆ ಸೂಕ್ತ ಪರಿಹಾರಾತ್ಮಕ ಸಲಹೆಗಳನ್ನು ನೀಡುವ ಕಾರ್ಯವನ್ನು ಈ ಕೇಂದ್ರಗಳು ಮಾಡಲಿವೆ. ವಿಜ್ಞಾನಿಗಳ ಕೈಗೊಳ್ಳುವ ಸಂಶೋಧನಾ ಕಾರ್ಯಗಳಿಗೆ ತಗುಲುವ ವೆಚ್ಚವನ್ನು ಭೂವಿಜ್ಞಾನ ಸಚಿವಾಲಯ ಭರಿಸಲಿದೆ.