<p><strong>ಬೆಂಗಳೂರು:</strong>ನಗರದ ನೀರಿನ ಸಮಸ್ಯೆ ಮತ್ತು ಸವಾಲುಗಳಿಗೆ ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಲಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ವಿವಿಧ ತಾಂತ್ರಿಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.</p>.<p>ಐಐಎಸ್ಸಿ, ಬೆಂಗಳೂರು ವಾಟರ್ ಸಲ್ಯೂಷನ್ ಲ್ಯಾಬ್ (ಡಬ್ಲ್ಯುಎಸ್ಎಲ್ಬಿ), ಹವಾಮಾನ ಬದಲಾವಣೆಗಾಗಿನ ದಿವೇಚಾ ಕೇಂದ್ರದೊಂದಿಗಿನ ಈ ಒಪ್ಪಂದಕ್ಕೆ ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಸೆ.25ರಂದು ಸಹಿ ಹಾಕಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಜಲಮಂಡಳಿಯು ಈ ಕೇಂದ್ರದ ವಿಜ್ಞಾನಿಗಳಿಗೆ ನೀಡಿದರೆ, ಅದಕ್ಕೆ ಸೂಕ್ತ ಪರಿಹಾರಾತ್ಮಕ ಸಲಹೆಗಳನ್ನು ನೀಡುವ ಕಾರ್ಯವನ್ನು ಈ ಕೇಂದ್ರಗಳು ಮಾಡಲಿವೆ. ವಿಜ್ಞಾನಿಗಳ ಕೈಗೊಳ್ಳುವ ಸಂಶೋಧನಾ ಕಾರ್ಯಗಳಿಗೆ ತಗುಲುವ ವೆಚ್ಚವನ್ನು ಭೂವಿಜ್ಞಾನ ಸಚಿವಾಲಯ ಭರಿಸಲಿದೆ.</p>.<p>ನೈಜ ಜಲಸಂರಕ್ಷಣೆ ಸೂಚ್ಯಂಕ ತಯಾರಿಸುವ ಕಾರ್ಯವನ್ನು ವಿಜ್ಞಾನಿಗಳು ಮಾಡಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ತಯಾರಿಸಲಿರುವ ಈ ಸೂಚ್ಯಂಕವು ನಗರದಲ್ಲಿನ ಕೆರೆಗಳು, ಅಂತರ್ಜಲದ ಮಟ್ಟ ಸೇರಿದಂತೆ ಸಂಪೂರ್ಣ ಜಲ ಸಂಪನ್ಮೂಲದ ಚಿತ್ರಣವನ್ನು ನೀಡಲಿದೆ. ಅಲ್ಲದೆ, ಶುದ್ಧೀಕರಿಸಿದ ಮಲಿನ ನೀರಿನ ಮಾರಾಟದ ಕುರಿತು ಸೂಚ್ಯಂಕ ತಿಳಿಸಲಿದೆ.</p>.<p><strong>‘ಸಮಸ್ಯೆಗೆ ವೈಜ್ಞಾನಿಕ ಪರಿಹಾರ’</strong></p>.<p>‘ನೀರು ಸಂರಕ್ಷಣೆ ಸೂಚ್ಯಂಕ, ಜಲಮಂಡಳಿಯನ್ನು ಹೇಗೆ ಬಲಪಡಿಸಬೇಕು, ತ್ಯಾಜ್ಯ ನೀರು ನಿರ್ವಹಣೆ ಮತ್ತು ಮಾರಾಟ ಹೇಗೆ ಮಾಡಬೇಕು ಎಂಬ ಅಂಶಗಳನ್ನು ಇಟ್ಟುಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ‘ಪ್ರಜಾವಾಣಿ’ಗೆ ಹೇಳಿದರು.</p>.<p>‘ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳ ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಜಲ ತಜ್ಞರು, ಸಂಶೋಧಕರು ಸಂಶೋಧನೆ ನಡೆಸಲಿದ್ದಾರೆ. ವೈಜ್ಞಾನಿಕ ಪರಿಹಾರಗಳನ್ನು ಅವರು ಸೂಚಿಸಲಿದ್ದಾರೆ. ಮಂಡಳಿಯ ಇತಿ–ಮಿತಿಯಲ್ಲಿ ಇವುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಅವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ನಗರದ ನೀರಿನ ಸಮಸ್ಯೆ ಮತ್ತು ಸವಾಲುಗಳಿಗೆ ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಲಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ವಿವಿಧ ತಾಂತ್ರಿಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.</p>.<p>ಐಐಎಸ್ಸಿ, ಬೆಂಗಳೂರು ವಾಟರ್ ಸಲ್ಯೂಷನ್ ಲ್ಯಾಬ್ (ಡಬ್ಲ್ಯುಎಸ್ಎಲ್ಬಿ), ಹವಾಮಾನ ಬದಲಾವಣೆಗಾಗಿನ ದಿವೇಚಾ ಕೇಂದ್ರದೊಂದಿಗಿನ ಈ ಒಪ್ಪಂದಕ್ಕೆ ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಸೆ.25ರಂದು ಸಹಿ ಹಾಕಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಜಲಮಂಡಳಿಯು ಈ ಕೇಂದ್ರದ ವಿಜ್ಞಾನಿಗಳಿಗೆ ನೀಡಿದರೆ, ಅದಕ್ಕೆ ಸೂಕ್ತ ಪರಿಹಾರಾತ್ಮಕ ಸಲಹೆಗಳನ್ನು ನೀಡುವ ಕಾರ್ಯವನ್ನು ಈ ಕೇಂದ್ರಗಳು ಮಾಡಲಿವೆ. ವಿಜ್ಞಾನಿಗಳ ಕೈಗೊಳ್ಳುವ ಸಂಶೋಧನಾ ಕಾರ್ಯಗಳಿಗೆ ತಗುಲುವ ವೆಚ್ಚವನ್ನು ಭೂವಿಜ್ಞಾನ ಸಚಿವಾಲಯ ಭರಿಸಲಿದೆ.</p>.<p>ನೈಜ ಜಲಸಂರಕ್ಷಣೆ ಸೂಚ್ಯಂಕ ತಯಾರಿಸುವ ಕಾರ್ಯವನ್ನು ವಿಜ್ಞಾನಿಗಳು ಮಾಡಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ತಯಾರಿಸಲಿರುವ ಈ ಸೂಚ್ಯಂಕವು ನಗರದಲ್ಲಿನ ಕೆರೆಗಳು, ಅಂತರ್ಜಲದ ಮಟ್ಟ ಸೇರಿದಂತೆ ಸಂಪೂರ್ಣ ಜಲ ಸಂಪನ್ಮೂಲದ ಚಿತ್ರಣವನ್ನು ನೀಡಲಿದೆ. ಅಲ್ಲದೆ, ಶುದ್ಧೀಕರಿಸಿದ ಮಲಿನ ನೀರಿನ ಮಾರಾಟದ ಕುರಿತು ಸೂಚ್ಯಂಕ ತಿಳಿಸಲಿದೆ.</p>.<p><strong>‘ಸಮಸ್ಯೆಗೆ ವೈಜ್ಞಾನಿಕ ಪರಿಹಾರ’</strong></p>.<p>‘ನೀರು ಸಂರಕ್ಷಣೆ ಸೂಚ್ಯಂಕ, ಜಲಮಂಡಳಿಯನ್ನು ಹೇಗೆ ಬಲಪಡಿಸಬೇಕು, ತ್ಯಾಜ್ಯ ನೀರು ನಿರ್ವಹಣೆ ಮತ್ತು ಮಾರಾಟ ಹೇಗೆ ಮಾಡಬೇಕು ಎಂಬ ಅಂಶಗಳನ್ನು ಇಟ್ಟುಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ‘ಪ್ರಜಾವಾಣಿ’ಗೆ ಹೇಳಿದರು.</p>.<p>‘ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳ ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಜಲ ತಜ್ಞರು, ಸಂಶೋಧಕರು ಸಂಶೋಧನೆ ನಡೆಸಲಿದ್ದಾರೆ. ವೈಜ್ಞಾನಿಕ ಪರಿಹಾರಗಳನ್ನು ಅವರು ಸೂಚಿಸಲಿದ್ದಾರೆ. ಮಂಡಳಿಯ ಇತಿ–ಮಿತಿಯಲ್ಲಿ ಇವುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಅವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>