‘ನಿಗದಿತ ದಿನದಂದು ಹಣ ನೀಡಿರಲಿಲ್ಲ. ಕಾರನ್ನೂ ವಾಪಸು ಕೊಟ್ಟಿರಲಿಲ್ಲ. ಅದನ್ನು ಕೇಳಿದ್ದಕ್ಕೆ ಆರೋಪಿಗಳು ದೂರುದಾರರಿಗೆ ಬೆದರಿಕೆ ಹಾಕಿದ್ದರು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರಿಂದ ಕಾರನ್ನು ವಾಪಸು ಕೊಟ್ಟಿದ್ದರು. ಆದರೆ, ಕಾರು ಕೆಟ್ಟಿತ್ತು. ಅದರ ದುರಸ್ತಿಗೆ ₹18 ಲಕ್ಷ ಖರ್ಚಾಗಿತ್ತು. ಈ ಸಂಗತಿಯನ್ನು ಜಾರ್ಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.