‘ಗಡಿಯಲ್ಲಿ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಡಿಭಾಗದಲ್ಲಿ ರಸ್ತೆ ಮಾರ್ಗವಿಲ್ಲದ ಕಾರಣಕ್ಕೆ ಆಹಾರ ಪೂರೈಕೆ ಈಗಲೂ ಕಷ್ಟವಾಗುತ್ತಿದೆ. ಈ ಸಂಕಷ್ಟ
ನಿವಾರಣೆ ಮಾಡಬೇಕು, ಯೋಧರಿಗೆ ಬಿಸಿಯಾದ ಆಹಾರ ತಕ್ಷಣವೇ ದೊರೆಯಬೇಕು ಎಂಬ ಉದ್ದೇಶದಿಂದ ಈ ಪುಟ್ಟ ಯಂತ್ರ ಆವಿಷ್ಕಾರ ಮಾಡಲಾಗಿದೆ. ರೈತರೂ ಕೃಷಿ ಪದಾರ್ಥಗಳ ಸಾಗಣೆಗೆ ಈ ಡ್ರೋನ್ ಬಳಕೆ ಮಾಡಿ
ಕೊಳ್ಳಬಹುದು’ ಎಂದು ಆಪರೇಟರ್ ಪುನೀತ್ ಅವರು ಹೇಳಿದರು.