<p><strong>ಬೆಂಗಳೂರು</strong>: ‘ಅಂತರಂಗ ಶುದ್ಧಿ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಚಾತುರ್ಮಾಸ್ಯ ಸಕಾಲ’ ಎಂದು ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. </p>.<p>ಜಯನಗರದಲ್ಲಿರುವ ಕೊಂಡರಾಮ ದೇವಸ್ಥಾನದಲ್ಲಿ ಗುರುವಾರ 25ನೇ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡ ಅವರು, ಆಶೀರ್ವಚನ ನೀಡಿದರು. </p>.<p>‘ಚಾತುರ್ಮಾಸ್ಯದ ಈ ಸಂದರ್ಭದಲ್ಲಿ ನಿಯಮಿತ ಚೌಕಟ್ಟು ಹಾಗೂ ಇತಿ ಮಿತಿಯೊಳಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಅಂತರಂಗವನ್ನು ಶುದ್ಧಿ ಮಾಡಿಕೊಳ್ಳಬೇಕು. ಜಪ, ಪೂಜೆ ಪುನಸ್ಕಾರ, ವ್ರತ ಅಥವಾ ಪಾರಾಯಣವನ್ನು ಈ ಸಂಧರ್ಭದಲ್ಲಿ ಮಾಡಿದರೆ ಅಂತರಂಗ ಶುದ್ಧಿಯಾಗುತ್ತದೆ. ಅಂತರಂಗ ಶುದ್ಧಿಯಾದಾಗ ಮಾತ್ರ ಮನುಷ್ಯನಿಗೆ ಮನಸ್ಸು ಶುದ್ಧಿಯಾಗುತ್ತದೆ. ಮನಸ್ಸು ಶುದ್ಧಿಯಾದಾಗ ಮನೆಯಲ್ಲಿ ಆರೋಗ್ಯ, ಮನೆ ಮಂದಿಯಲ್ಲಿ ಒಳ್ಳೆ ರೀತಿಯ ಸಂಬಂಧಗಳು ಬೆಳೆಯುತ್ತವೆ’ ಎಂದು ಹೇಳಿದರು.</p>.<p>ಚಾತುರ್ಮಾಸ್ಯ ಸೇವಾ ಸಮಿತಿಯ ಸಂಚಾಲಕ ನಾಗರಾಜ ಶೆಟ್ಟಿ, ‘ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿ ನಿತ್ಯ ಗುರುಗಳಿಂದ ನವಾವರಣ ಶ್ರೀಚಕ್ರ ಪೂಜೆ ನಡೆಯಲಿದೆ. ಸಂಜೆ ವೇಳೆ ಆಶೀರ್ವಚನ ಇರುತ್ತದೆ’ ಎಂದರು.</p>.<p>ಹರಿಹರಪುರ ಮಠದ ಆಡಳಿತಾಧಿಕಾರಿ ಚಂದ್ರನ್, ‘ಗುರುಗಳ ದರ್ಶನ ಮತ್ತು ಸೇವೆಯಿಂದ ಅಜ್ಞಾನ ತೊಲಗಿ, ವಿಜ್ಞಾನ ಪ್ರಾಪ್ತಿಯಾಗುತ್ತದೆ. ಅಜ್ಞಾನದಿಂದ ಜ್ಞಾನ ಪಡೆದು, ಜ್ಞಾನದಿಂದ ಮೋಕ್ಷ ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಅಂತರಂಗ ಶುದ್ಧಿ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಚಾತುರ್ಮಾಸ್ಯ ಸಕಾಲ’ ಎಂದು ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. </p>.<p>ಜಯನಗರದಲ್ಲಿರುವ ಕೊಂಡರಾಮ ದೇವಸ್ಥಾನದಲ್ಲಿ ಗುರುವಾರ 25ನೇ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡ ಅವರು, ಆಶೀರ್ವಚನ ನೀಡಿದರು. </p>.<p>‘ಚಾತುರ್ಮಾಸ್ಯದ ಈ ಸಂದರ್ಭದಲ್ಲಿ ನಿಯಮಿತ ಚೌಕಟ್ಟು ಹಾಗೂ ಇತಿ ಮಿತಿಯೊಳಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಅಂತರಂಗವನ್ನು ಶುದ್ಧಿ ಮಾಡಿಕೊಳ್ಳಬೇಕು. ಜಪ, ಪೂಜೆ ಪುನಸ್ಕಾರ, ವ್ರತ ಅಥವಾ ಪಾರಾಯಣವನ್ನು ಈ ಸಂಧರ್ಭದಲ್ಲಿ ಮಾಡಿದರೆ ಅಂತರಂಗ ಶುದ್ಧಿಯಾಗುತ್ತದೆ. ಅಂತರಂಗ ಶುದ್ಧಿಯಾದಾಗ ಮಾತ್ರ ಮನುಷ್ಯನಿಗೆ ಮನಸ್ಸು ಶುದ್ಧಿಯಾಗುತ್ತದೆ. ಮನಸ್ಸು ಶುದ್ಧಿಯಾದಾಗ ಮನೆಯಲ್ಲಿ ಆರೋಗ್ಯ, ಮನೆ ಮಂದಿಯಲ್ಲಿ ಒಳ್ಳೆ ರೀತಿಯ ಸಂಬಂಧಗಳು ಬೆಳೆಯುತ್ತವೆ’ ಎಂದು ಹೇಳಿದರು.</p>.<p>ಚಾತುರ್ಮಾಸ್ಯ ಸೇವಾ ಸಮಿತಿಯ ಸಂಚಾಲಕ ನಾಗರಾಜ ಶೆಟ್ಟಿ, ‘ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿ ನಿತ್ಯ ಗುರುಗಳಿಂದ ನವಾವರಣ ಶ್ರೀಚಕ್ರ ಪೂಜೆ ನಡೆಯಲಿದೆ. ಸಂಜೆ ವೇಳೆ ಆಶೀರ್ವಚನ ಇರುತ್ತದೆ’ ಎಂದರು.</p>.<p>ಹರಿಹರಪುರ ಮಠದ ಆಡಳಿತಾಧಿಕಾರಿ ಚಂದ್ರನ್, ‘ಗುರುಗಳ ದರ್ಶನ ಮತ್ತು ಸೇವೆಯಿಂದ ಅಜ್ಞಾನ ತೊಲಗಿ, ವಿಜ್ಞಾನ ಪ್ರಾಪ್ತಿಯಾಗುತ್ತದೆ. ಅಜ್ಞಾನದಿಂದ ಜ್ಞಾನ ಪಡೆದು, ಜ್ಞಾನದಿಂದ ಮೋಕ್ಷ ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>