ನಾಟಕದ ನಿರ್ದೇಶಕ ಅರ್ಜುನ್ ಕಬ್ಬಿಣ, ‘ಸಿಹಿಕಹಿ ಚಂದ್ರು, ಸುಂದರ್ ವೀಣಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ಯುವ ಪ್ರತಿಭೆಗಳಿಗೂ ಅವಕಾಶ ನೀಡಿದ್ದೇವೆ. ರಾಜೇಂದ್ರ ಕಾರಂತ್ ನಾಟಕ ರಚಿಸಿದ್ದಾರೆ. ಶ್ರೀಧರ ಮೂರ್ತಿ ರಂಗಸಜ್ಜಿಕೆ ಮಾಡಲಿದ್ದು, ಬಿ.ವಿ.ಪ್ರವೀಣ್ ಮತ್ತು ಬಿ.ವಿ.ಪ್ರದೀಪ್ ಸಂಗೀತ ನೀಡಲಿದ್ದಾರೆ. ಪ್ರದೀಪ್ ಬೆಳವಾಡಿ ಅವರು ಬೆಳಕು ಹಾಗೂ ವಿಜಯ್ಕುಮಾರ್ ಬೆಣಚ ಅವರು ಪ್ರಸಾದನ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.