ಬೆಂಗಳೂರು: ‘ಯೋಜನೆಯೊಂದರ ನೈಜತೆ ಹಾಗೂ ಸಫಲತೆಯ ಅರಿವಾಗುವುದು ಆರಂಭಿಕ ಹಂತದಲ್ಲಿ. ಹೀಗಾಗಿ ತಳ ಹಂತದಲ್ಲೇ ಸಂಶೋಧನೆಗಳನ್ನು ನಡೆಸಲು ಒತ್ತು ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾರತೀಯ ಉದ್ಯಮ ಒಕ್ಕೂಟ ಹಾಗೂ ಭಾರತೀಯ ನಿರ್ಮಾಣ ಉಪಕರಣಗಳ ಉತ್ಪಾದಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಎಕ್ಸ್ಕಾನ್’ ನಿರ್ಮಾಣ ಉಪಕರಣಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ನೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಯುವಕರಲ್ಲಿ ಸ್ವಂತಿಕೆ ಬೆಳೆಸಬೇಕು. ನಾವೀನ್ಯತೆ ಮೈಗೂಡಿಸಿಕೊಳ್ಳುವ ದಿಸೆಯಲ್ಲಿ ಅವರನ್ನು ಪ್ರೋತ್ಸಾಹಿಸಬೇಕು. ದುಡಿಯುವ ವರ್ಗದ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದರು.