‘ರಾಜ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 300 ಆಮ್ಲಜನಕ ವೆಂಟಿಲೇಟರ್ ನೀಡಲಾಗಿದೆ.ಈ ಉದ್ದೇಶಕ್ಕೆ ₹2 ಕೋಟಿಯಷ್ಟು ವೆಚ್ಚವಾಗಿದೆ. ನೆಲಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು ವೆಂಟಿಲೇಟರ್ ಮತ್ತು ಹತ್ತು ಆಮ್ಲಜನಕ ಕಾನ್ಸೆಂಟ್ರೇಟರ್ ನೀಡಲಾಗಿದೆ. ತಲಾ 20ಕಾನ್ಸೆಂಟ್ರೇಟರ್ಗಳನ್ನು ದೇವನಹಳ್ಳಿ ಮತ್ತು ಆನೇಕಲ್ ಗ್ರಾಮಗಳಿಗೆ ನೀಡಲಾಗಿದೆ. ದೇವನಹಳ್ಳಿ ಮತ್ತು ಆನೇಕಲ್ನಲ್ಲಿ ಕಾನ್ಸೆಂಟ್ರೇಟರ್ ಬ್ಯಾಂಕ್ ತೆರೆಯಲಾಗಿದ್ದು, ಅಗತ್ಯವಿರುವರಿಗೆ ಇಲ್ಲಿನ ಸಿಬ್ಬಂದಿ ಒದಗಿಸುತ್ತಾರೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದರು.