ಕದಂಬ, ಚಾಲುಕ್ಯ,ಹೊಯ್ಸಳ, ವಿಜಯನಗರ, ಬಹುಮನಿ ಸುಲ್ತಾನರ ಸಾಮ್ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಚಿನ್ನ ಮತ್ತು ತಾಮ್ರದ ನಾಣ್ಯಗಳು ಇಲ್ಲಿವೆ. ಮೈಸೂರು ರಾಜ್ಯದಲ್ಲಿ ಹೈದರಾಲಿ ಕಾಲದಲ್ಲಿದ್ದ ಶಿವ–ಪಾರ್ವತಿ ಚಿತ್ರ ಇರುವ ನಾಣ್ಯಗಳು, ಟಿಪ್ಪು ಸುಲ್ತಾನ ಕಾಲದಲ್ಲಿ ಉರ್ದುವಿನಲ್ಲಿ ಬರೆದಿರುವ ನಾಣ್ಯಗಳನ್ನು ಕೇಶವಮೂರ್ತಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.