<p><strong>ಬೆಂಗಳೂರು</strong>: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯ ಮೇಲೂ ‘ಕೋವಿಡ್- 19’ ಪರಿಣಾಮ ಉಂಟಾಗಿದೆ.</p>.<p>ಬಂಬೂ ಬಜಾರ್ ಬಳಿ ಕಂಟೋನ್ಮೆಂಟ್ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ತಂದು ಇಡಲಾಗಿದೆ.</p>.<p>ಚೀನಾದಿಂದ ಬಂದಿರುವ ಈ ದೈತ್ಯ ಯಂತ್ರಗಳ ಬಿಡಿ ಭಾಗಗಳನ್ನು ಜೋಡಿಸುವ ಕಾರ್ಯ ನಡೆಯಬೇಕಿದೆ. ಈ ಕಾರ್ಯಕ್ಕೆ ಚೀನಾ ರೈಲ್ವೆ<br />ಕನ್ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ ಕಾರ್ಪೊ ರೇಷನ್ ಲಿಮಿಟೆಡ್ (ಸಿಆರ್ಸಿಎಚ್ಐಸಿ) ಕಂಪನಿಯ ನೌಕರರು ಚೀನಾದಿಂದ ಬರಬೇಕು. ಆದರೆ, ಕೊರೊನಾ ವೈರಸ್ ಹರಡುವ ಭೀತಿಯಿಂದ, ಚೀನಿಯರ ಭಾರತ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ತೆಗೆದ ಬಳಿಕ ಚೀನಾದಿಂದ ತಜ್ಞ ನೌಕರರು ಬಂದ ನಂತರವೇ ಪೂರ್ಣ ಪ್ರಮಾಣದಲ್ಲಿ ಸುರಂಗ ಕೊರೆಯುವ ಕಾರ್ಯ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಎಲ್ ಆ್ಯಂಡ್ ಟಿಗೆ ಗುತ್ತಿಗೆ</strong>: 6 ಕಿ.ಮೀ ಸುರಂಗ ಮಾರ್ಗ ನಿರ್ಮಿಸುವ ಗುತ್ತಿಗೆಯನ್ನು ₹2,628 ಕೋಟಿಗೆ<br />ಎಲ್ ಆ್ಯಂಡ್ ಟಿ ಕಂಪನಿ ಪಡೆದುಕೊಂಡಿದೆ.</p>.<p>ಚೀನಾದ ಸಿಆರ್ಸಿಎಚ್ಐಸಿ ಈ ಕಂಪನಿಯಿಂದ ನಾಲ್ಕು ಟಿಬಿಎಂಗಳನ್ನು ಅದು ಖರೀದಿಸುತ್ತಿದೆ. ಎರಡು ಟಿಬಿಎಂಗಳು ನಗರಕ್ಕೆ ಬಂದಿದ್ದು, ಇನ್ನೆರಡು ಶೀಘ್ರದಲ್ಲೇ ಬರಲಿವೆ.</p>.<p>ಮತ್ತೊಂದು ಯಂತ್ರವನ್ನು ಶಿವಾಜಿನಗರದಲ್ಲಿ ಇಡಲಾಗಿದೆ. ಈ ಯಂತ್ರದ ಬಿಡಿಭಾಗಗಳ ಜೋಡಣೆ ಕಾರ್ಯವೂ ಚೀನಾದ ನೌಕರರು<br />ಬಂದ ನಂತರವೇ ಆರಂಭವಾಗಲಿದೆ. ಬಂಬೂ ಬಜಾರ್ನಿಂದ ಶಿವಾಜಿನಗರದ ಕಡೆ ಒಂದು, ಟ್ಯಾನರಿ ರಸ್ತೆಯ ಕಡೆಗೆ ಒಂದು ಸುರಂಗ ಮಾರ್ಗ ನಿರ್ಮಾಣವಾಗಲಿದೆ.</p>.<p>ಎರಡನೇ ಹಂತದಲ್ಲಿ ಒಟ್ಟು 13 ಕಿ.ಮೀ. ಮೆಟ್ರೊ ಸುರಂಗ ಕಾರಿಡಾರ್ ನಿರ್ಮಾಣವಾಗಲಿದೆ. ಒಟ್ಟು ಎರಡು ಪ್ಯಾಕೇಜ್ಗಳ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಪಡೆದಿದ್ದು, ಮುಂಬೈನ ಆಫ್ಕಾನ್ಸ್ಇನ್ಫ್ರಾಸ್ಟ್ರಕ್ಚರ್ ಕಂಪನಿ ಮತ್ತು ಕೋಲ್ಕತ್ತದ ಐಟಿಡಿ ಸಿಮೆಂಟೇಷನ್ ಇಂಡಿಯಾ ತಲಾ ಒಂದು ಪ್ಯಾಕೇಜ್ನ ಗುತ್ತಿಗೆಯನ್ನು ಪಡೆದಿವೆ. ಈ ಕಾಮಗಾರಿ ಪೂರ್ಣಗೊಳಿಸಲು ಮೂರೂ ಕಂಪನಿಗಳಿಗೆ ಮೂರೂವರೆ ವರ್ಷಗಳ ಗಡುವು ನೀಡಲಾಗಿದೆ.</p>.<p>ಟಿಬಿಎಂಗಳನ್ನು ಜೋಡಿಸಲು ಚೀನಾದಿಂದ ಆ ಕಂಪನಿಯ ತಜ್ಞರೊಬ್ಬರು ಬರಬೇಕಿದೆ. ಸುರಂಗ ಕೊರೆಯುವ ಕಾರ್ಯ ನಿಗದಿಗಿಂತ ಸ್ವಲ್ಪ ತಡವಾಗಿ ಆರಂಭವಾಗಲಿದೆ</p>.<p><strong>-ಅಜಯ್ ಸೇಠ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯ ಮೇಲೂ ‘ಕೋವಿಡ್- 19’ ಪರಿಣಾಮ ಉಂಟಾಗಿದೆ.</p>.<p>ಬಂಬೂ ಬಜಾರ್ ಬಳಿ ಕಂಟೋನ್ಮೆಂಟ್ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ತಂದು ಇಡಲಾಗಿದೆ.</p>.<p>ಚೀನಾದಿಂದ ಬಂದಿರುವ ಈ ದೈತ್ಯ ಯಂತ್ರಗಳ ಬಿಡಿ ಭಾಗಗಳನ್ನು ಜೋಡಿಸುವ ಕಾರ್ಯ ನಡೆಯಬೇಕಿದೆ. ಈ ಕಾರ್ಯಕ್ಕೆ ಚೀನಾ ರೈಲ್ವೆ<br />ಕನ್ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ ಕಾರ್ಪೊ ರೇಷನ್ ಲಿಮಿಟೆಡ್ (ಸಿಆರ್ಸಿಎಚ್ಐಸಿ) ಕಂಪನಿಯ ನೌಕರರು ಚೀನಾದಿಂದ ಬರಬೇಕು. ಆದರೆ, ಕೊರೊನಾ ವೈರಸ್ ಹರಡುವ ಭೀತಿಯಿಂದ, ಚೀನಿಯರ ಭಾರತ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ತೆಗೆದ ಬಳಿಕ ಚೀನಾದಿಂದ ತಜ್ಞ ನೌಕರರು ಬಂದ ನಂತರವೇ ಪೂರ್ಣ ಪ್ರಮಾಣದಲ್ಲಿ ಸುರಂಗ ಕೊರೆಯುವ ಕಾರ್ಯ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಎಲ್ ಆ್ಯಂಡ್ ಟಿಗೆ ಗುತ್ತಿಗೆ</strong>: 6 ಕಿ.ಮೀ ಸುರಂಗ ಮಾರ್ಗ ನಿರ್ಮಿಸುವ ಗುತ್ತಿಗೆಯನ್ನು ₹2,628 ಕೋಟಿಗೆ<br />ಎಲ್ ಆ್ಯಂಡ್ ಟಿ ಕಂಪನಿ ಪಡೆದುಕೊಂಡಿದೆ.</p>.<p>ಚೀನಾದ ಸಿಆರ್ಸಿಎಚ್ಐಸಿ ಈ ಕಂಪನಿಯಿಂದ ನಾಲ್ಕು ಟಿಬಿಎಂಗಳನ್ನು ಅದು ಖರೀದಿಸುತ್ತಿದೆ. ಎರಡು ಟಿಬಿಎಂಗಳು ನಗರಕ್ಕೆ ಬಂದಿದ್ದು, ಇನ್ನೆರಡು ಶೀಘ್ರದಲ್ಲೇ ಬರಲಿವೆ.</p>.<p>ಮತ್ತೊಂದು ಯಂತ್ರವನ್ನು ಶಿವಾಜಿನಗರದಲ್ಲಿ ಇಡಲಾಗಿದೆ. ಈ ಯಂತ್ರದ ಬಿಡಿಭಾಗಗಳ ಜೋಡಣೆ ಕಾರ್ಯವೂ ಚೀನಾದ ನೌಕರರು<br />ಬಂದ ನಂತರವೇ ಆರಂಭವಾಗಲಿದೆ. ಬಂಬೂ ಬಜಾರ್ನಿಂದ ಶಿವಾಜಿನಗರದ ಕಡೆ ಒಂದು, ಟ್ಯಾನರಿ ರಸ್ತೆಯ ಕಡೆಗೆ ಒಂದು ಸುರಂಗ ಮಾರ್ಗ ನಿರ್ಮಾಣವಾಗಲಿದೆ.</p>.<p>ಎರಡನೇ ಹಂತದಲ್ಲಿ ಒಟ್ಟು 13 ಕಿ.ಮೀ. ಮೆಟ್ರೊ ಸುರಂಗ ಕಾರಿಡಾರ್ ನಿರ್ಮಾಣವಾಗಲಿದೆ. ಒಟ್ಟು ಎರಡು ಪ್ಯಾಕೇಜ್ಗಳ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಪಡೆದಿದ್ದು, ಮುಂಬೈನ ಆಫ್ಕಾನ್ಸ್ಇನ್ಫ್ರಾಸ್ಟ್ರಕ್ಚರ್ ಕಂಪನಿ ಮತ್ತು ಕೋಲ್ಕತ್ತದ ಐಟಿಡಿ ಸಿಮೆಂಟೇಷನ್ ಇಂಡಿಯಾ ತಲಾ ಒಂದು ಪ್ಯಾಕೇಜ್ನ ಗುತ್ತಿಗೆಯನ್ನು ಪಡೆದಿವೆ. ಈ ಕಾಮಗಾರಿ ಪೂರ್ಣಗೊಳಿಸಲು ಮೂರೂ ಕಂಪನಿಗಳಿಗೆ ಮೂರೂವರೆ ವರ್ಷಗಳ ಗಡುವು ನೀಡಲಾಗಿದೆ.</p>.<p>ಟಿಬಿಎಂಗಳನ್ನು ಜೋಡಿಸಲು ಚೀನಾದಿಂದ ಆ ಕಂಪನಿಯ ತಜ್ಞರೊಬ್ಬರು ಬರಬೇಕಿದೆ. ಸುರಂಗ ಕೊರೆಯುವ ಕಾರ್ಯ ನಿಗದಿಗಿಂತ ಸ್ವಲ್ಪ ತಡವಾಗಿ ಆರಂಭವಾಗಲಿದೆ</p>.<p><strong>-ಅಜಯ್ ಸೇಠ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>