<p><strong>ಬೆಂಗಳೂರು: </strong>ಕೊರೊನಾ ಸೋಂಕಿ ನಿಂದ ನಗರದಲ್ಲಿ ಮತ್ತೆ 6 ಮಂದಿ ಮೃತಪಟ್ಟಿರುವುದು ಬುಧವಾರ ದೃಢ ಪಟ್ಟಿದೆ. ಇದರಿಂದಾಗಿ ಕೋವಿಡ್ಗೆ ಸಾವಿಗೀಡಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಹೊಸದಾಗಿ 55 ಕೋವಿಡ್ ಪ್ರಕರಣಗಳು ವರದಿ ಯಾ ಗಿದ್ದು, ಸೋಂಕಿತರ ಸಂಖ್ಯೆ 827ಕ್ಕೆ ಏರಿಕೆಯಾಗಿದೆ.</p>.<p>ಬುಧವಾರ ವರದಿಯಾದ ಪ್ರಕರಣಗಳಲ್ಲಿ 14 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 17 ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕು ಮಂದಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗಿಲ್ಲ.</p>.<p>ಹಾಲನಾಯಕನಹಳ್ಳಿಯ ಕೃಷ್ಣಪ್ಪ ನಗರದಲ್ಲಿ 38 ವರ್ಷದ ರೋಗಿಯ ಸಂಪರ್ಕದಿಂದ ಒಂದೇ ಕುಟುಂಬದ ನಾಲ್ವರು ಸೋಂಕಿತರಾಗಿದ್ದಾರೆ. 6 ವರ್ಷದ ಬಾಲಕಿ, 10 ವರ್ಷದ ಬಾಲಕ, 34 ವರ್ಷದ ಮಹಿಳೆ ಹಾಗೂ 68 ವರ್ಷದ ವೃದ್ಧೆಗೆ ಸೋಂಕು ತಗ ಲಿದೆ. ಕುಮಾರಸ್ವಾಮಿ ಲೇಔಟ್ನಲ್ಲಿ 45 ವರ್ಷದ ರೋಗಿಯ ಸಂಪರ್ಕ ಹೊಂದಿದ್ದ ಅವರ ಕುಟುಂಬದ 39 ವರ್ಷದ ಮಹಿಳೆ ಹಾಗೂ 2 ವರ್ಷದ ಗಂಡು ಮಗು ಕೋವಿಡ್ ಪೀಡಿತರಾಗಿದ್ದಾರೆ. ಬೇಗೂರು ಮುಖ್ಯರಸ್ತೆಯ ಹೊಂಗ ಸಂದ್ರ ಬಸ್ ನಿಲ್ದಾಣ ಬಳಿಯ<br />ಮಹಿಳೆಯೊಬ್ಬಳಿಗೆ ಕೆಲ ದಿನಗಳ ಹಿಂದೆ ಸೋಂಕು ತಗಲಿತ್ತು.ಈಗ ಅವರ ಕುಟುಂಬದ 30 ವರ್ಷದ ಪುರುಷ ಹಾಗೂ 43 ವರ್ಷದ ಮಹಿಳೆ ರೋಗಿಗಳಾಗಿ ಆಸ್ಪತ್ರೆ ಸೇರಿದ್ದಾರೆ.</p>.<p>ಉಸಿರಾಟದ ಸಮಸ್ಯೆಯಿಂದ ಬಳ ಲುತ್ತಿದ್ದ ಮಂಗಮ್ಮನಪಾಳ್ಯದ 65 ವರ್ಷದ ವೃದ್ಧ ಕಿಮ್ಸ್ಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಹೆಬ್ಬಗೋಡಿಯ ವಿನಾಯಕನಗರದ 31ವರ್ಷದ ಪುರುಷ, ದೂರವಾಣಿನಗರದ 55 ವರ್ಷದ ಪುರುಷ, ಅಬ್ಬಿಗೆರೆ ದಿಣ್ಣೆ ಸರ್ಕಲ್ನ 67 ವರ್ಷದ ವೃದ್ಧೆ ಹೊಳೆ ನರಸಿಪುರದ ಸೊನ್ನೇನ<br />ಹಳ್ಳಿಯ 28 ವರ್ಷದ ಯುವತಿ ಸೋಂಕಿತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೊರೊನಾ ಸೋಂಕಿ ನಿಂದ ನಗರದಲ್ಲಿ ಮತ್ತೆ 6 ಮಂದಿ ಮೃತಪಟ್ಟಿರುವುದು ಬುಧವಾರ ದೃಢ ಪಟ್ಟಿದೆ. ಇದರಿಂದಾಗಿ ಕೋವಿಡ್ಗೆ ಸಾವಿಗೀಡಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಹೊಸದಾಗಿ 55 ಕೋವಿಡ್ ಪ್ರಕರಣಗಳು ವರದಿ ಯಾ ಗಿದ್ದು, ಸೋಂಕಿತರ ಸಂಖ್ಯೆ 827ಕ್ಕೆ ಏರಿಕೆಯಾಗಿದೆ.</p>.<p>ಬುಧವಾರ ವರದಿಯಾದ ಪ್ರಕರಣಗಳಲ್ಲಿ 14 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 17 ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕು ಮಂದಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗಿಲ್ಲ.</p>.<p>ಹಾಲನಾಯಕನಹಳ್ಳಿಯ ಕೃಷ್ಣಪ್ಪ ನಗರದಲ್ಲಿ 38 ವರ್ಷದ ರೋಗಿಯ ಸಂಪರ್ಕದಿಂದ ಒಂದೇ ಕುಟುಂಬದ ನಾಲ್ವರು ಸೋಂಕಿತರಾಗಿದ್ದಾರೆ. 6 ವರ್ಷದ ಬಾಲಕಿ, 10 ವರ್ಷದ ಬಾಲಕ, 34 ವರ್ಷದ ಮಹಿಳೆ ಹಾಗೂ 68 ವರ್ಷದ ವೃದ್ಧೆಗೆ ಸೋಂಕು ತಗ ಲಿದೆ. ಕುಮಾರಸ್ವಾಮಿ ಲೇಔಟ್ನಲ್ಲಿ 45 ವರ್ಷದ ರೋಗಿಯ ಸಂಪರ್ಕ ಹೊಂದಿದ್ದ ಅವರ ಕುಟುಂಬದ 39 ವರ್ಷದ ಮಹಿಳೆ ಹಾಗೂ 2 ವರ್ಷದ ಗಂಡು ಮಗು ಕೋವಿಡ್ ಪೀಡಿತರಾಗಿದ್ದಾರೆ. ಬೇಗೂರು ಮುಖ್ಯರಸ್ತೆಯ ಹೊಂಗ ಸಂದ್ರ ಬಸ್ ನಿಲ್ದಾಣ ಬಳಿಯ<br />ಮಹಿಳೆಯೊಬ್ಬಳಿಗೆ ಕೆಲ ದಿನಗಳ ಹಿಂದೆ ಸೋಂಕು ತಗಲಿತ್ತು.ಈಗ ಅವರ ಕುಟುಂಬದ 30 ವರ್ಷದ ಪುರುಷ ಹಾಗೂ 43 ವರ್ಷದ ಮಹಿಳೆ ರೋಗಿಗಳಾಗಿ ಆಸ್ಪತ್ರೆ ಸೇರಿದ್ದಾರೆ.</p>.<p>ಉಸಿರಾಟದ ಸಮಸ್ಯೆಯಿಂದ ಬಳ ಲುತ್ತಿದ್ದ ಮಂಗಮ್ಮನಪಾಳ್ಯದ 65 ವರ್ಷದ ವೃದ್ಧ ಕಿಮ್ಸ್ಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಹೆಬ್ಬಗೋಡಿಯ ವಿನಾಯಕನಗರದ 31ವರ್ಷದ ಪುರುಷ, ದೂರವಾಣಿನಗರದ 55 ವರ್ಷದ ಪುರುಷ, ಅಬ್ಬಿಗೆರೆ ದಿಣ್ಣೆ ಸರ್ಕಲ್ನ 67 ವರ್ಷದ ವೃದ್ಧೆ ಹೊಳೆ ನರಸಿಪುರದ ಸೊನ್ನೇನ<br />ಹಳ್ಳಿಯ 28 ವರ್ಷದ ಯುವತಿ ಸೋಂಕಿತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>