<p><strong>ಬೆಂಗಳೂರು: </strong>ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ನಗರದಲ್ಲಿ ಘೋಷಿಸಲಾಗಿರುವ ಲಾಕ್ಡೌನ್ ಹೆಸರಿಗಷ್ಟೇ ಎಂಬಂತಾಗಿದೆ. ನಗರದಲ್ಲಿ ಗುರುವಾರ ಹಲವೆಡೆ ಜನರ ಓಡಾಟ ಹಾಗೂ ವಾಹನಗಳ ಸಂಚಾರ ಕಂಡುಬಂತು. ದಟ್ಟಣೆಯೂ ಉಂಟಾಯಿತು.</p>.<p>ಲಾಕ್ಡೌನ್ ಜಾರಿಯಾದ ಎರಡನೇ ದಿನವಾದರೂ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಜನರ ಓಡಾಟವಿತ್ತು. ಉದ್ಯಾನಗಳು ಬಂದ್ ಮಾಡಲಾಗಿದ್ದು, ಅಷ್ಟಾದರೂ ಹಲವರು ರಸ್ತೆಯಲ್ಲೇ ವಾಯುವಿಹಾರ ಮಾಡಿದರು.</p>.<p>ಬೆಳಿಗ್ಗೆ 5ರಿಂದ 12ರವರೆಗೆ ಅಂಗಡಿಗಳು ತೆರೆದಿದ್ದವು. ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮನೆಯಿಂದ ಹೊರಗೆ ಬಂದು ಅಂಗಡಿ ಎದುರು ಸರದಿಯಲ್ಲಿ ನಿಂತಿದ್ದು ಕಂಡುಬಂತು.</p>.<p>ಮಧ್ಯಾಹ್ನ 12ರ ನಂತರವೂ ವಿಜಯನಗರ, ಚಾಮರಾಜಪೇಟೆ, ರಾಜಾಜಿನಗರ, ಬಸವೇಶ್ವರನಗರ, ಗಾಯತ್ರಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಅಂಗಡಿಗಳು ತೆರೆದಿದ್ದವು. ಪೊಲೀಸರೇ ಲಾಠಿ ಹಿಡಿದುಕೊಂಡು ಅಂಗಡಿಗಳನ್ನು ಮುಚ್ಚಿಸಿದರು. ಹಲವು ಗ್ರಾಹಕರು, ವಸ್ತುಗಳನ್ನು ಖರೀದಿಸಲಾಗದೇ ವಾಪಸು ಮನೆಗೆ ಹೋದರು.</p>.<p>ದಿನಸಿ, ಕಿರಾಣಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ವ್ಯಾಪಾರ ಅಷ್ಟಕ್ಕಷ್ಟೇ ಇತ್ತು. ಹಲವರು ತಳ್ಳುಗಾಡಿಯಲ್ಲೂ ವ್ಯಾಪಾರ ಮಾಡಿದರು.</p>.<p>‘ತರಕಾರಿ ಮಾರಿದರೆ ನಮ್ಮ ಹೊಟ್ಟೆ ತುಂಬುವುದು. ಬೆಳಿಗ್ಗೆಯೇ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದೇನೆ. ಗ್ರಾಹಕರು ಕಡಿಮೆ ಇದ್ದಾರೆ. ಸ್ವಲ್ಪ ವ್ಯಾಪಾರವಾದರೆ ಸಾಕು’ ಎಂದು ವಿಜಯನಗರದ ವ್ಯಾಪಾರಿ ಶಂಕರ್ ಹೇಳಿದರು.</p>.<p>ಶಾರದಮ್ಮ, ‘ರೈತರಿಂದ ಹೂವು ಖರೀದಿಸುತ್ತೇನೆ. ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತೇನೆ. ಲಾಕ್ಡೌನ್ ಇದ್ದರೂ ಹೊಟ್ಟೆ ಕೇಳಲ್ಲ. ದುಡಿಯಲೇ ಬೇಕು’ ಎಂದರು.</p>.<p class="Subhead"><strong>ವಾಹನಗಳ ಸಂಚಾರ; </strong>ಲಾಕ್ಡೌನ್ ಸಮಯದಲ್ಲೂ ಹಲವು ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಎಂ.ಜಿ.ರಸ್ತೆ, ಶಿವಾಜಿನಗರ, ಕೋರಮಂಗಲ, ಮಡಿವಾಳ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು.</p>.<p>ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಇಷ್ಟಾದರೂ ಹಲವರು ವಾಹನಗಳಲ್ಲಿ ಸುತ್ತಾಡುತ್ತಿದ್ದಾರೆ. ಆಟೊ ಹಾಗೂ ಕ್ಯಾಬ್ಗಳು ಸಹ ಓಡಾಡುತ್ತಿವೆ.</p>.<p>ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹಾಗೂ ಪೂರ್ವ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ ಅವರು ತಮ್ಮ ವ್ಯಾಪ್ತಿಯಲ್ಲಿ ಸಿಬ್ಬಂದಿ ಜೊತೆಯಲ್ಲಿ ವಾಹನಗಳ ತಪಾಸಣೆ ನಡೆಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ಆಟೊ, ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಸಿದರು. ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಿದರು.</p>.<p>ಹಲವರು ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದರು. ಅಂಥವರಿಗೂ ಸ್ಥಳದಲ್ಲೇ ದಂಡ ವಿಧಿಸಲಾಯಿತು.</p>.<p><strong>‘ಲಾಠಿಯೇ ಪರಿಹಾರವಲ್ಲ’</strong><br />ಲಾಕ್ಡೌನ್ ಜಾರಿಯಾದರೂ ಕೆಲವೆಡೆ ಜನ ಓಡಾಡುತ್ತಿದ್ದಾರೆ. ಬೆಂಗಳೂರು ದೊಡ್ಡ ನಗರ. ಇಲ್ಲಿ ಜನರ ಓಡಾಟ ಇದ್ದೇ ಇರುತ್ತದೆ. ಅವರೆಲ್ಲರನ್ನೂ ನಿಯಂತ್ರಿಸಲು ಲಾಠಿಯೇ ಪರಿಹಾರವಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ನಗರದಲ್ಲಿ ಘೋಷಿಸಲಾಗಿರುವ ಲಾಕ್ಡೌನ್ ಹೆಸರಿಗಷ್ಟೇ ಎಂಬಂತಾಗಿದೆ. ನಗರದಲ್ಲಿ ಗುರುವಾರ ಹಲವೆಡೆ ಜನರ ಓಡಾಟ ಹಾಗೂ ವಾಹನಗಳ ಸಂಚಾರ ಕಂಡುಬಂತು. ದಟ್ಟಣೆಯೂ ಉಂಟಾಯಿತು.</p>.<p>ಲಾಕ್ಡೌನ್ ಜಾರಿಯಾದ ಎರಡನೇ ದಿನವಾದರೂ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಜನರ ಓಡಾಟವಿತ್ತು. ಉದ್ಯಾನಗಳು ಬಂದ್ ಮಾಡಲಾಗಿದ್ದು, ಅಷ್ಟಾದರೂ ಹಲವರು ರಸ್ತೆಯಲ್ಲೇ ವಾಯುವಿಹಾರ ಮಾಡಿದರು.</p>.<p>ಬೆಳಿಗ್ಗೆ 5ರಿಂದ 12ರವರೆಗೆ ಅಂಗಡಿಗಳು ತೆರೆದಿದ್ದವು. ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮನೆಯಿಂದ ಹೊರಗೆ ಬಂದು ಅಂಗಡಿ ಎದುರು ಸರದಿಯಲ್ಲಿ ನಿಂತಿದ್ದು ಕಂಡುಬಂತು.</p>.<p>ಮಧ್ಯಾಹ್ನ 12ರ ನಂತರವೂ ವಿಜಯನಗರ, ಚಾಮರಾಜಪೇಟೆ, ರಾಜಾಜಿನಗರ, ಬಸವೇಶ್ವರನಗರ, ಗಾಯತ್ರಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಅಂಗಡಿಗಳು ತೆರೆದಿದ್ದವು. ಪೊಲೀಸರೇ ಲಾಠಿ ಹಿಡಿದುಕೊಂಡು ಅಂಗಡಿಗಳನ್ನು ಮುಚ್ಚಿಸಿದರು. ಹಲವು ಗ್ರಾಹಕರು, ವಸ್ತುಗಳನ್ನು ಖರೀದಿಸಲಾಗದೇ ವಾಪಸು ಮನೆಗೆ ಹೋದರು.</p>.<p>ದಿನಸಿ, ಕಿರಾಣಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ವ್ಯಾಪಾರ ಅಷ್ಟಕ್ಕಷ್ಟೇ ಇತ್ತು. ಹಲವರು ತಳ್ಳುಗಾಡಿಯಲ್ಲೂ ವ್ಯಾಪಾರ ಮಾಡಿದರು.</p>.<p>‘ತರಕಾರಿ ಮಾರಿದರೆ ನಮ್ಮ ಹೊಟ್ಟೆ ತುಂಬುವುದು. ಬೆಳಿಗ್ಗೆಯೇ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದೇನೆ. ಗ್ರಾಹಕರು ಕಡಿಮೆ ಇದ್ದಾರೆ. ಸ್ವಲ್ಪ ವ್ಯಾಪಾರವಾದರೆ ಸಾಕು’ ಎಂದು ವಿಜಯನಗರದ ವ್ಯಾಪಾರಿ ಶಂಕರ್ ಹೇಳಿದರು.</p>.<p>ಶಾರದಮ್ಮ, ‘ರೈತರಿಂದ ಹೂವು ಖರೀದಿಸುತ್ತೇನೆ. ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತೇನೆ. ಲಾಕ್ಡೌನ್ ಇದ್ದರೂ ಹೊಟ್ಟೆ ಕೇಳಲ್ಲ. ದುಡಿಯಲೇ ಬೇಕು’ ಎಂದರು.</p>.<p class="Subhead"><strong>ವಾಹನಗಳ ಸಂಚಾರ; </strong>ಲಾಕ್ಡೌನ್ ಸಮಯದಲ್ಲೂ ಹಲವು ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಎಂ.ಜಿ.ರಸ್ತೆ, ಶಿವಾಜಿನಗರ, ಕೋರಮಂಗಲ, ಮಡಿವಾಳ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು.</p>.<p>ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಇಷ್ಟಾದರೂ ಹಲವರು ವಾಹನಗಳಲ್ಲಿ ಸುತ್ತಾಡುತ್ತಿದ್ದಾರೆ. ಆಟೊ ಹಾಗೂ ಕ್ಯಾಬ್ಗಳು ಸಹ ಓಡಾಡುತ್ತಿವೆ.</p>.<p>ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹಾಗೂ ಪೂರ್ವ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ ಅವರು ತಮ್ಮ ವ್ಯಾಪ್ತಿಯಲ್ಲಿ ಸಿಬ್ಬಂದಿ ಜೊತೆಯಲ್ಲಿ ವಾಹನಗಳ ತಪಾಸಣೆ ನಡೆಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ಆಟೊ, ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಸಿದರು. ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಿದರು.</p>.<p>ಹಲವರು ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದರು. ಅಂಥವರಿಗೂ ಸ್ಥಳದಲ್ಲೇ ದಂಡ ವಿಧಿಸಲಾಯಿತು.</p>.<p><strong>‘ಲಾಠಿಯೇ ಪರಿಹಾರವಲ್ಲ’</strong><br />ಲಾಕ್ಡೌನ್ ಜಾರಿಯಾದರೂ ಕೆಲವೆಡೆ ಜನ ಓಡಾಡುತ್ತಿದ್ದಾರೆ. ಬೆಂಗಳೂರು ದೊಡ್ಡ ನಗರ. ಇಲ್ಲಿ ಜನರ ಓಡಾಟ ಇದ್ದೇ ಇರುತ್ತದೆ. ಅವರೆಲ್ಲರನ್ನೂ ನಿಯಂತ್ರಿಸಲು ಲಾಠಿಯೇ ಪರಿಹಾರವಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>