‘ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು, ಗುಣಮುಖರಾದ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಲು, ರೋಗಿ ಸಾವಿಗೀಡಾದರೆ ಮೃತದೇಹ ಹಸ್ತಾಂತರಿಸಲು, ಈ ಸಹಾಯಕೇಂದ್ರ ನೆರವಾಗಲಿದೆ. ರೋಗ ವಾಸಿಯಾದವರು ಅನಗತ್ಯವಾಗಿ ಆಸ್ಪತ್ರೆಯಲ್ಲೇ ಉಳಿದುಕೊಂಡರೆ ಅಗತ್ಯ ಇರುವ ಇತರ ರೋಗಿಗಳಿಗೆ ಸೌಕರ್ಯ ಸಿಗದಂತಾಗುತ್ತದೆ. ಇದನ್ನು ಸಹಾಯಕೇಂದ್ರ ಆರಂಭಿಸಿದರೆ ಇದನ್ನು ತಡೆಯಬಹುದು. ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ಶುಲ್ಕಪಡೆಯುವುದನ್ನು ನಿಯಂತ್ರಿಸುವುದಕ್ಕೂ ಇದು ನೆರವಾಗಲಿದೆ’ ಎಂದು ಅವರು ವಿವರಿಸಿದರು.