ಹಣ ಕೊಟ್ಟು ವರದಿ ಖರೀದಿ: ‘ಕೊಠಡಿಯಲ್ಲಿದ್ದ ಪ್ರಜೆ, ತಮ್ಮ ಕಂಪನಿ ಉದ್ಯೋಗಿಗಳಾದ ರಾಣೇಶ್ ಹಾಗೂ ರವೀಂದ್ರ ಅವರನ್ನು ಸಂಪರ್ಕಿಸಿದ್ದರು. ದಕ್ಷಿಣ ಆಫ್ರಿಕಾಗೆ ವಾಪಸು ಹೋಗಲು ಅನುಕೂಲವಾಗುವಂತೆ ‘ಕೋವಿಡ್ ಸೋಂಕು ಇಲ್ಲ ಎಂಬ’ ವರದಿ ತರಿಸಿಕೊಡುವಂತೆ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಆರೋಪಿಗಳು, ಲ್ಯಾಬ್ ಸಿಬ್ಬಂದಿಯನ್ನು ಸಂಪರ್ಕಿಸಿ ಹಣ ಕೊಟ್ಟು ನಕಲಿ ವರದಿ ಖರೀದಿಸಿ ತಂದುಕೊಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.