ಶಾಸಕ ಮುನಿರತ್ನ ಹೇಳಿಕೆ
‘ಯಾವುದೇ ವಿಷಯ ಆಗಿರಲಿ ಊಹಾಪೋಹದ ಬಗ್ಗೆ ಚರ್ಚೆ ಮಾಡುವುದುಬೇಡ. ಪೊಲೀಸರ ತನಿಖೆಗೆ ಸಹಕಾರ ನೀಡಬೇಕಾಗಿದೆ. ಪೊಲೀಸರು ಪ್ರಮಾಣಿಕವಾಗಿ ತನಿಖೆ ಮಾಡುತ್ತಾರೆ. ವೆಂಕಟೇಶ್ ತಂದೆ ನನ್ನ ತಂದೆ ಬಾಲ್ಯ ಸ್ನೇಹಿತರು, ನಾವು ಕೂಡ ಜೊತೆಯಲ್ಲೇ ಬೆಳೆದವರು. ಆತನಿಗೆ ಹೀಗೆ ಆಗಿರುವುದು ಮನಸ್ಸಿಗೆ ಬಹಳ ನೋವಾಗಿದೆ’ ಎಂದು ಹೇಳಿದರು.