<p><strong>ಬೆಂಗಳೂರು:</strong> ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಪ್ರಭು (37) ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.</p>.<p>‘ತಮಿಳುನಾಡು ವೆಲ್ಲೂರಿನ ಪ್ರಭು, ವೃತ್ತಿಯಲ್ಲಿ ಚಾಲಕ. ಚೀಲವೊಂದನ್ನು ಹಿಡಿದುಕೊಂಡು ಪೈಪ್ಲೈನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಸ್ಥಳೀಯರು ನೀಡಿದ್ದ ಮಾಹಿತಿಯಂತೆ ದಾಳಿ ಮಾಡಿ ಆತನನ್ನು ಸೆರೆ ಹಿಡಿಯಲಾಯಿತು’ ಎಂದು ಪೊಲೀಸರು ಹೇಳಿದರು.</p>.<p>‘ಆತನ ಬಳಿ ಮೂರು ಜಿಂಕೆಗಳ ಚರ್ಮ ಸಿಕ್ಕಿತು. ವೆಲ್ಲೂರಿಗೆ ಕರೆದೊಯ್ದು ಆತನ ಮನೆಯಲ್ಲೂ ತಪಾಸಣೆ ಮಾಡಲಾಯಿತು. ಅಲ್ಲಿ ಮೂರು ಕೊಂಬುಗಳು ಸಿಕ್ಕವು. ಅವೆಲ್ಲವನ್ನೂ ಜಪ್ತಿ ಮಾಡಲಾಗಿದೆ’ ಎಂದರು.</p>.<p>‘ಅರಣ್ಯ ಪ್ರದೇಶ ಸಮೀಪದಲ್ಲೇ ವಾಸವಿರುವ ವ್ಯಕ್ತಿಗಳು, ಜಿಂಕೆಯನ್ನು ಕೊಂದು ಮಾಂಸವನ್ನು ತಿಂದಿದ್ದಾರೆ. ಚರ್ಮ ಹಾಗೂ ಕೊಂಬುಗಳನ್ನು ನನಗೆ ನೀಡಿ ಮಾರಾಟ ಮಾಡುವಂತೆ ಹೇಳಿದ್ದರು. ಕಮಿಷನ್ ಆಸೆಯಿಂದ ಚರ್ಮವನ್ನು ಮಾರಲು ಬೆಂಗಳೂರಿಗೆ ಬಂದಿದ್ದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲಿಸರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಪ್ರಭು (37) ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.</p>.<p>‘ತಮಿಳುನಾಡು ವೆಲ್ಲೂರಿನ ಪ್ರಭು, ವೃತ್ತಿಯಲ್ಲಿ ಚಾಲಕ. ಚೀಲವೊಂದನ್ನು ಹಿಡಿದುಕೊಂಡು ಪೈಪ್ಲೈನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಸ್ಥಳೀಯರು ನೀಡಿದ್ದ ಮಾಹಿತಿಯಂತೆ ದಾಳಿ ಮಾಡಿ ಆತನನ್ನು ಸೆರೆ ಹಿಡಿಯಲಾಯಿತು’ ಎಂದು ಪೊಲೀಸರು ಹೇಳಿದರು.</p>.<p>‘ಆತನ ಬಳಿ ಮೂರು ಜಿಂಕೆಗಳ ಚರ್ಮ ಸಿಕ್ಕಿತು. ವೆಲ್ಲೂರಿಗೆ ಕರೆದೊಯ್ದು ಆತನ ಮನೆಯಲ್ಲೂ ತಪಾಸಣೆ ಮಾಡಲಾಯಿತು. ಅಲ್ಲಿ ಮೂರು ಕೊಂಬುಗಳು ಸಿಕ್ಕವು. ಅವೆಲ್ಲವನ್ನೂ ಜಪ್ತಿ ಮಾಡಲಾಗಿದೆ’ ಎಂದರು.</p>.<p>‘ಅರಣ್ಯ ಪ್ರದೇಶ ಸಮೀಪದಲ್ಲೇ ವಾಸವಿರುವ ವ್ಯಕ್ತಿಗಳು, ಜಿಂಕೆಯನ್ನು ಕೊಂದು ಮಾಂಸವನ್ನು ತಿಂದಿದ್ದಾರೆ. ಚರ್ಮ ಹಾಗೂ ಕೊಂಬುಗಳನ್ನು ನನಗೆ ನೀಡಿ ಮಾರಾಟ ಮಾಡುವಂತೆ ಹೇಳಿದ್ದರು. ಕಮಿಷನ್ ಆಸೆಯಿಂದ ಚರ್ಮವನ್ನು ಮಾರಲು ಬೆಂಗಳೂರಿಗೆ ಬಂದಿದ್ದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲಿಸರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>